Tumgik
#ಸರ್ವಧರ್ಮ
achintyachaitanya · 6 years
Text
ಸರ್ವಧರ್ಮಸ್ವರೂಪಿ ಶ್ರೀ ರಾಮಕೃಷ್ಣ ಪರಮಹಂಸ
ಸರ್ವಧರ್ಮಸ್ವರೂಪಿ ಶ್ರೀ ರಾಮಕೃಷ್ಣ ಪರಮಹಂಸ : ಇಂದು ರಾಮಕೃಷ್ಣ ಪರಮಹಂಸ ಜಯಂತಿ
ಈ ಆಧುನಿಕ ಯುಗಕ್ಕೆ ಬೇಕಾದ ಸಮನ್ವಯ ಧರ್ಮವನ್ನು ರಾಮಕೃಷ್ಣ ಪರಮಹಂಸರು ಸ್ಥಾಪಿಸಿದರು. ಅದು ಏಕಕಾಲಕ್ಕೆ ಎಲ್ಲ ಧರ್ಮಗಳನ್ನೂ ಒಳಗೊಂಡ ಮತ್ತು ಎಲ್ಲದರಿಂದಲೂ ಹೊರತಾದ ವಿಶ್ವ ಧರ್ಮ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಪರಮಹಂಸರನ್ನು ‘ಸ್ಥಾಪಕಾಯ ಚ ಧರ್ಮಸ್ಯ’ ಎಂದು ಸ್ತುತಿಸಿರುವುದು.
ಶ್ರೀರಾಮಕೃಷ್ಣರುಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ…
View On WordPress
0 notes
j3tvkannada · 3 years
Video
instagram
#ಕಳಚಿತು_ಭಾವೈಕ್ಯದ_ ಕೊಂಡಿ.. ತಮ್ಮ ಪ್ರವಚನದ ಮೂಲಕ ಅಸಂಖ್ಯಾತ ಕನ್ನಡಿಗರ ಮನಗೆದ್ದ ಬಸವಾದಿ ಶರಣರ ವಚನಗಳನ್ನು ಸುಲಲಿತವಾಗಿ ಜನರಿಗೆ ಮನದಟ್ಟಾಗುವಂತೆ ಬೋಧಿಸಿ ಸರ್ವಧರ್ಮ ಪ್ರೇಮಿಯಾದ #ಕನ್ನಡದ_ಕಬೀರ ಪೂಜ್ಯನಿಯ ಶ್ರೀ #ಇಬ್ರಾಹಿಂ_ಸುತಾರ್ ಗುರುಗಳು ಇಂದು ನಮ್ಮನ್ನಗಲಿದ್ದು ಇಡೀ ಕನ್ನಡ ನಾಡಿನ ಪ್ರವಚನ ಲೋಕಕ್ಕೆ,ಸಾಹಿತ್ಯ ಲೋಕಕ್ಕೆ ಹಾಗೂ ಭಾವೈಕ್ಯ ಲೋಕಕ್ಕೆ ತುಂಬಲಾರದ ನಷ್ಟ. 🇮🇳🕉☪✝🇮🇳 (at Bangalore, India) https://www.instagram.com/p/CZmayNTqY6U/?utm_medium=tumblr
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
[26/6 7:41 ಪೂರ್ವಾಹ್ನ] + ಬೆಂಗಳೂರು ಮಹಾನಗರದ ಸೃಷ್ಟಿಕರ್ತ ಸರ್ವಧರ್ಮ ಸಮನಾಗಿ ಕಂಡ ಯುಗಪುರುಷ ಅನ್ನದಾತನ ನೆರಳಾದ ಸಾವಿರಾರು ಕೆರೆ ನಿರ್ಮಾಣ ಮಾಡಿದ ಕೆಚ್ಚೆದೆಯ ಕರುನಾಡ ಕರುಣಾಮಯಿ ಒಕ್ಕಲಿಗ ಕುಲ ತಿಲಕ ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿ ಜೂನ್ 27ರಂದು ಪ್ರತಿ ಮನೆಗಳಲ್ಲಿ ವಿಜೃಂಭಿಸಲಿ.
ಜೈ ಕೆಂಪೇಗೌಡ ಜೈ ಒಕ್ಕಲಿಗ.
✍️ ನಿಮ್ಮ ಪ್ರೀತಿಯ ಒಕ್ಕಲಿಗ ಮಹಾಸಭಾ ಟಿ,ಜಗದೀಶ್ ಗೌಡ
[26/6 11:39 ಪೂರ್ವಾಹ್ನ] +9: ಎಲ್ಲರಿಗೂ
ಬೆಳಗಿನ ವಂದನೆಗಳು. ವಿಧಾನಸೌಧದಿಂದ ಕೇವಲ 1 ಕಿಲೋ ಮೀಟರ್ ಒಳಗಡೆ ಚಾಲುಕ್ಯ ಸರ್ಕಲ್ ಬಳಿ ಬಸವೇಶ್ವರರ ಪ್ರತಿಮೆ ಇದ್ದರು ವಿಧಾನಸೌಧದ ಆವರಣದಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಲು ಪ್ರಯತ್ನ ನಡೆದಿದೆ. ಹೀಗಿರುವಾಗ, ಬೆಂಗಳೂರು ನಿರ್ಮಾತೃ ನಾಡಪ್ರಭು ಶ್ರೀಕೆಂಪೇಗೌಡರ ಜಯಂತಿ ನಾಳೆ ಇದ್ದು, ಈ ಸಂದರ್ಭದಲ್ಲಿ ಇವರ ಪ್ರತಿಮೆ ಸ್ಥಾಪನೆಗೂ ಕ್ರಮಕೈಗೊಳ್ಳಲು ನಾವು ಒತ್��ಡ ಹೇರಬೇಕು. ಇದು ನಮ್ಮ ಅಸ್ಮಿತೆಯ ಪ್ರಶ್ನೆ.
ಇಲ್ಲವಾದಲ್ಲಿ, ಈಗಾಗಲೇ ಹಲವು ಮಹನಿಯರೇ ಪ್ರತಿಮೆಗಳಿಂದ ತುಂಬಿ ತುಳುಕಾಡುತ್ತಿರುವ ವಿಧಾನಸೌಧ ಆವರಣದಲ್ಲಿ ಇನ್ನೂ ಮುಂದೆ ಯಾವುದೇ ಪ್ರತಿಮೆ ಸ್ಥಾಪಿಸದಂತೆ ಕ್ರಮಕೈಗೊಳ್ಳಬೇಕು.
0 notes
vgowda · 4 years
Text
ತ್ರಿವಿಕ್ರಮನ ಹೆಜ್ಜೆ ಅಸಡ್ಡಾಳವಾಗುತ್ತಿರುವ ಬಗೆ
ಓಣಂ, ಕೇರಳದಲ್ಲಿ ಮತ್ತು ಮಲಯಾಳಿಗಳ ಪಾಲಿಗೆ ಬಹಳ ದೊಡ್ಡ ಹಬ್ಬ. ನಮ್ಮಲ್ಲಿ ದೀಪಾವಳಿಯ ಭಾಗವಾಗಿ ಯಾವ ಬಲೀಂದ್ರನನ್ನು ಪೂಜಿಸಲಾಗುತ್ತದೆಯೋ ಅದೇ ಮಹಾಬಲಿಯ ನೆನಪನ್ನು ಸಂಭ್ರಮಿಸುವ ಹಬ್ಬ ಓಣಂ. ಮಹಾಬಲಿಯ ನಾಡಲ್ಲಿ ಮನುಷ್ಯರೆಲ್ಲರೂ ಒಂದು ಎಂಬುದೇ ಓಣಂನ ಜೀವಭಾಗ.
ಮಹಾಬಲಿ ಯಾರು? ಅವನು ರಾಕ್ಷಸ ರಾಜ. ಕೇರಳದಲ್ಲಿ ಪ್ರಚಲಿತದಲ್ಲಿರುವ ಪುರಾಣದ ಪ್ರಕಾರ, ಮಹಾಬಲಿಯ ಆಳ್ವಿಕೆಯ ಕಾಲ ಸುವರ್ಣಯುಗವಾಗಿತ್ತು. ಯಾರು ಏನೇ ಕೇಳಿದರೂ ಕೊಡಬಲ್ಲವನಾಗಿದ್ದ ಅವನ ಆಧಿಪತ್ಯದಲ್ಲಿ ರ���ಜ್ಯದಲ್ಲಿ ಸಮೃದ್ಧತೆ ತುಂಬಿತ್ತು. ಮನುಷ್ಯರ ನಡುವಿನ ಅಸಮಾನತೆಗೂ ಅವನ ರಾಜ್ಯದಲ್ಲಿ ಆಸ್ಪದ ಇರಲಿಲ್ಲ. ಮಹಾಬಲಿ ಎಷ್ಟು ಲೋಕವಿಖ್ಯಾತನಾಗಿಬಿಟ್ಟಿದ್ದ ಎಂದರೆ, ದೇವತೆಗಳಿಗೆ ನಡುಕ ಶುರುವಾಗಿತ್ತು. ತಮ್ಮನ್ನೇ ಆಳುವ ಮಟ್ಟಕ್ಕೆ ಬರುತ್ತಾನೆ ಎಂದು ಆತಂಕಗೊಂಡ ದೇವತೆಗಳು ವಿಷ್ಣುವಿನ ಬಳಿ ಹೋಗಿ, ಮಹಾಬಲಿಯನ್ನು ನಿವಾರಿಸಲು ಕೇಳಿಕೊಳ್ಳುತ್ತಾರೆ. ವಿಷ್ಣು ವಾಮನನಾಗಿ ಬಲಿಯನ್ನು ಪಾತಾಳಕ್ಕೆ ತುಳಿಯುವುದು ನಂತರದ ಕಥೆ. ಇಲ್ಲಿ, ಬಲಿಯನ್ನು ಮುಗಿಸುವುದಕ್ಕೆ ವಿಷ್ಣುವಿಗೆ ಸಿಕ್ಕ ನೆಪವಾದರೂ ಏನು? ಮನುಷ್ಯರಲ್ಲಿನ ಅಸಮಾನತೆಯ ಬಗ್ಗೆ ಆ ರಾಕ್ಷಸನಿಗೆ ನಂಬಿಕೆಯಿರಲಿಲ್ಲ ಎನ್ನುವುದು.
Tumblr media
ಅವತ್ತು ವಾಮನ ತ್ರಿವಿಕ್ರಮನಾದದ್ದು ಅತ್ಯಂತ ಸ್ವಾರ್ಥಿಗಳ ಮತ್ತು ತಮ್ಮವರಲ್ಲದವರ ಬಗ್ಗೆ ಅಸಹಿಷ್ಣತೆ ಹೊಂದಿದ್ದವರ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ. ಆ ತ್ರಿವಿಕ್ರಮ ರೂಪ ಇವತ್ತು ಇನ್ನಷ್ಟು ಸ್ವಾರ್ಥ ಮತ್ತು ಅಸಹನೆಯೊಡನೆ ಬೆಳೆದು ನಿಂತಿದೆ. ಸಮಾನತೆ, ಸಾತ್ವಿಕತೆಯ ಪಾಲಿನ ನರಕವಾಗಿ ಅದು ಪರಮಕ್ರೂರ ವಾತಾವರಣವನ್ನು ಸೃಷ್ಟಿಸಿದೆ.
ಕೇರಳದಲ್ಲಿ ಏನಾಗುತ್ತಿದೆ? ಮಹಾಬಲಿ ಎನ್ನುವವನು ಇರಾನ್ ಕಡೆಯ ಒಬ್ಬ ರಾಜ ಮತ್ತು ಅವನು ಕೇರಳವನ್ನು ಆಕ್ರಮಿಸಿಕೊಂಡಿದ್ದ. ಅವನಿಂದ ಕೇರಳವನ್ನು ಬಿಡಿಸಲು ವಾಮನ ಬಂದ. ಹಾಗಾಗಿ ವಾಮನ ಕೇರಳದ ಸ್ವಾತಂತ್ರ್ಯ ಹೋರಾಟಗಾರ ಎಂಬ ಹೊಸ ಕಥೆಯನ್ನು ಸೃಷ್ಟಿಸಲಾಗಿದೆ. ಓಣಂ ಎಂಬುದು ವಾಮನ ಮಹೋತ್ಸವವೇ ಹೊರತು ಬಲಿಯನ್ನು ಪೂಜಿಸುವ ಹಬ್ಬವಲ್ಲ ಎಂದು ಎಲ್ಲವನ್ನೂ ತಿರುಚುವ ಪ್ರಯತ್ನಗಳನ್ನು ಪಂಡಿತರೆನ್ನಿಸಿಕೊಂಡವರ ಮೂಲಕ ಮಾಡಿಸಲಾಗುತ್ತಿದೆ.
ಯಾವ ರಾಜಕೀಯ ಬಲವು ಶಕ್ತಿದೇವತೆಯ ನಾಡಾದ ಪಶ್ಚಿಮ ಬಂಗಾಳದಲ್ಲಿ ರಾಮನ ಹೆಸರಿನ ಮೆರವಣಿಗೆಯನ್ನು ಖಡ್ಗ ಹಿಡಿದು ಮಾಡುತ್ತದೆಯೊ, ದ್ರಾವಿಡ ಚಳವಳಿಯ ನೆಲ ತಮಿಳುನಾಡಿನಲ್ಲಿ ಪ್ರವೇಶ ಪಡೆಯುವುದಕ್ಕೆ ಯತ್ನಿಸುತ್ತಿದೆಯೊ ಅದು ಕೇರಳದಲ್ಲಿಯೂ ತನ್ನನ್ನು ತಾನು ಸ್ಥಾಪಿಸಿಕೊಳ್ಳುವುದಕ್ಕೆ ಒಂದು ಸಾತ್ವಿಕ ರೂಪಕದ ಮೇಲೆ ಮಾಡುತ್ತಿರುವ ದಾಳಿ ಇದು. ಮನುಷ್ಯರೆಲ್ಲರೂ ಒಂದು ಎನ್ನುವ ಸರ್ವಧರ್ಮ ಸಮನ್ವಯದ ಭಾವ ಅದಕ್ಕೆ ಬೇಕಿಲ್ಲ.
ಎಷ್ಟು ಅಪಾಯಕಾರಿ ಸನ್ನಿವೇಶ ಇದೆಂದರೆ, ಭಾವೈಕ್ಯದ ರೂಪಕವಾಗಿರುವ ಹಬ್ಬಗಳನ್ನು, ಒಡೆಯುವ ಹುನ್ನಾರದ ಕಣ್ಣಿಂದ ನೋಡುತ್ತ, ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ನಡೆದಿದೆ. ಒಂದು ಸುದೀರ್ಘ ಕಾಲಘಟ್ಟದಲ್ಲಿ ಜನಪದವನ್ನು ನಡೆಸಿಕೊಂಡು ಬಂದ ಪ್ರತಿಮೆಯನ್ನು ಒಡೆದು ಬಿತ್ತರಿಸಲಾಗುವ ಆಲೋಚನೆಗಳು ವ್ಯಾಪಕವಾಗುತ್ತಿವೆ. ತಮಗಾಗದ ಎಲ್ಲವನ್ನೂ ತಮ್ಮ ಕಲುಷಿತ ಮನಃಸ್ಥಿತಿಗೆ ತಕ್ಕಂತೆ ಬದಲಿಸಿಬಿಡುವ ಭಂಜಕತನ ಮಾನವೀಯವಾದದ್ದನ್ನು ಮಾತ್ರ ಉಲ್ಲಂಘಿಸುತ್ತಿಲ್ಲ. ಬದಲಿಗೆ, ಬದುಕಿನಲ್ಲಿ ಉನ್ನತವಾದುದರ ಬಗೆಗಿನ ಎಚ್ಚರದಿಂದಲೂ ದೂರವಾಗುತ್ತಿದೆ. ತಮ್ಮ ನಾಳೆಗಳನ್ನೂ ತಾವೇ ನಾಶ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಜೀವನ್ಮಯೀ ರೂಪಕಗಳ ಹತ್ಯೆಗೈಯುತ್ತಿರುವವರು ಮರೆಯುತ್ತಿದ್ದಾರೆ. ಇದೆಲ್ಲವೂ ಅಸಡ್ಡಾಳ ಹೆಜ್ಜೆಯಂತೆ ಕಾಣಿಸುತ್ತಿದೆ. ಬಸವಣ್ಣನವರು ಕೇಳುತ್ತಾರೆ: ಕೊಂದವರುಳಿವರೆ?
ಸತ್ಯವೊಂದು ಇದೆಲ್ಲವನ್ನೂ ಮೀರಿ ಇದೆ. ಏನೆಂದರೆ, ಕೊಲ್ಲುವವರು ತಾವು ಹೊಸ ಚರಿತ್ರೆಯನ್ನು ಬರೆದುಬಿಟ್ಟಿದ್ದೇವೆಂಬ ಭ್ರಮೆಯಲ್ಲಿ ಸಾಯುತ್ತಿರುವಾಗ, ಮನುಷ್ಯತ್ವದ ಲೋಕದೊಳಗಿನ ನಿಜವಾದ ಚರಿತ್ರೆಯು ತನ್ನ ಕಾಣ್ಕೆಯನ್ನು ಮೂರ್ತಗೊಳಿಸುವ ಅದಮ್ಯ ಪ್ರಯತ್ನದಲ್ಲಿರುತ್ತದೆ, ಕೋಶವನ್ನೊಡೆದು ಬರುವ ರಂಗುರಂಗಿನ ಚಿಟ್ಟೆಯ ಹಾಗೆ. ಮತ್ತು ಅದು ಎಲ್ಲ ಕ್ಷುಲ್ಲಕಗಳಾಚೆಗಿನ, ಮಾನವೀಯ ಬಣ್ಣ ಮತ್ತು ಬೆಳಕಿನ ಹಬ್ಬ.
0 notes
chamundinews · 4 years
Text
ಬೆಂಗಳೂರು ಸರ್ವೋದಯ ಸೇವಾ ಸಂಘ ಆಶ್ರಮದಿಂದ ಬಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ!
Tumblr media Tumblr media
ಪಾವಗಡ: ಕೊರೋನಾ ವೈರಸ್ ಎಂಬ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ದೇಶವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ತಾಲ್ಲೂಕಿನ ವೈ. ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ಬೆಂಗಳೂರಿನ ಸರ್ವೋದಯ ಸೇವಾ ಸಂಘ ಆಶ್ರಮದ ಪ್ರವೀಣ್ ಗುರೂಜಿ ಮತ್ತು ರಾಜಶೇಖರ್ ಗುರ���ಜಿ ಸಹಕಾರದೊಂದಿಗೆ ಸಿದ್ದಾಪುರ ಸರ್ವಧರ್ಮ ಪೀಠದ ಶ್ರೀ ರಾಮಮೂರ್ತಿ ಸ್ವಾಮೀಜಿಗಳು ಬಡಜನರಿಗೆ ಹಾಗೂ ನಿರ್ಗತಿಕರಿಗೆ ಸುಮಾರು 100 ಬಡ ಕಾರ್ಮಿಕ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೋನಾ ಎಂಬ ಹೆಮ್ಮಾರಿಯ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕನಿಷ್ಠ ಒಂದು ಹೊತ್ತಿನ ಊಟಕ್ಕೂ ಸಹ ಜನರು ಪರದಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬೆಂಗಳೂರಿನ ಸರ್ವೋದಯ ಸೇವಾ ಸಂಘ ಆಶ್ರಮದಿಂದ ಸಹಕಾರದೊಂದಿಗೆ ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ಕಷ್ಟಕರ ಪರಿಸ್ಥಿತಿಯಲ್ಲಿರುವ ಬಡ ಕಾರ್ಮಿಕರ ಕುಟುಂಬಗಳಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದೇವೆ ಎಂದರು. ಸಮಾಜ ಸೇವಕರಾದ ಯಜಮಾನ್ ನಾಗೇಂದ್ರ ಬಾಬು ಮಾತನಾಡಿ ಕೊರೋನಾ ವೈರಸ್ ಅಟ್ಟಹಾಸಕ್ಕೆ ದೇಶದಲ್ಲಿ ಲಾಕ್ ಡೌನ್ 4.O ಜಾರಿಯಲ್ಲಿದ್ದು, ಕಂಟೇನ್ ಮೆಂಟ್ ಜೋನ್ ಹೊರತು ಪಡಿಸಿ ಉಳಿದೆಲ್ಲಾ ಕಡೆ ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ಜಾಗೃತಿಯಿಂದ ಇರಬೇಕು. ಹಾಗೂ ಶುಚಿತ್ವದ ಕಡೆ ಹೆಚ್ಚು ಗಮನ ಹರಿಸಬೇಕು ನಾನು ನನ್ನ ಕೈಲಾದಷ್ಟು ಬಡಜನರಿಗೆ ಹಾಗೂ ನಿರ್ಗತಿಕರಿಗೆ ಉಚಿತವಾಗಿ ದಿನಸಿ ಕಿಟ್ ತರಕಾರಿ ಕಿಟ್ ವಿತರಣೆ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದು ಹೇಳಿದರು. ತಾಲ್ಲೂಕಿನ ಎಲ್ಲಾ ಪತ್ರಕರ್ತರಿಗೂ ಈ ಸಂದರ್ಭದಲ್ಲಿ ಬೆಂಗಳೂರಿನ ಸರ್ವೋದಯ ಸೇವಾ ಸಂಘ ಆಶ್ರಮದಿಂದ ವತಿಯಿಂದ ದಿನಸಿ ಕಿಟ್ ವಿತರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಪಿ.ಟಿ. ಜಗನ್ನಾಥ್. ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ವರದಿ:ರಾಮಪ್ಪ ಚಾಮುಂಡಿ ನ್ಯೂಸ್ ಪಾವಗಡ Read the full article
0 notes
love-indianculture · 5 years
Photo
Tumblr media
10 ವರ್ಷಗಳ ಹಿಂದೆ ಅಯೋಧ್ಯೆ ಎಂದರೆ ಕೋಮು ಗಲಭೆ ಎನ್ನುವ ಕಾಲವಿತ್ತು ಇಂದು ಅಯೋಧ್ಯೆ ಎಂದರೆ ಸೌಹಾರ್ದತೆ ಎಂದು ತೋರಿಸಿಕೊಟ್ಟರು ನಮ್ಮ #NarendraModi ಭಾರತ ವಿಶ್ವಗುರು ಆಗುತ್ತಿದೆ ಎನ್ನುವುದರಲ್ಲಿ ಯಾವುದೆ ಅನುಮಾನವಿಲ್ಲ ಸರ್ವಧರ್ಮ, ಜಾತಿ ಮತ ಒಗ್ಗೂಡಿ ನವ ಭಾರತ ನಿರ್ಮಾಣ ಆಗುವ ನಂಬಿಕೆ ಭಾರತೀಯರಲ್ಲಿ ಬಂದಿದೆ ಧನ್ಯವಾದಗಳು @narendramodi https://www.instagram.com/p/B4t8PKfnAtU/?igshid=cncjittvwjgn
0 notes
satwadharanews-blog · 7 years
Text
ಸ್ಕೌಟ್ಸ್ ಸಂಸ್ಥಾಪಕ: ಬೇಡನ್ ಪೊವೆಲ್ ದಿನಾಚರಣೆ
ಕುಮಟಾ: ಇಲ್ಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಜನತಾ ವಿದ್ಯಾಲಯ ಮಿರ್ಜಾನಿನ ಕೆನಡಿ-ನೆಹರು ಸಭಾಭವನದಲ್ಲಿ ಸ್ಕೌಡ್ಸ್ ಸಂಸ್ಥಾಪಕ ಬೇಡನ್ ಪೊವೆಲ್ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮದ ಆರಂಭದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
ಹಿರಿಯ ಸ್ಕೌಟ್ ಅಂತರಾಷ್ಟ್ರೀಯ ಸಾಧಕ ಶಿಕ್ಷಕ ರಾಜು ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಾನಿಕ ಘಟಕದ ಅಧ್ಯಕ್ಷ ಅತುಲ್ ಕಾಮತ ಅವರು ನೂತನವಾಗಿ ಆಯ್ಕೆಯಾದ ಗಿಬ್ ವಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕ…
View On WordPress
0 notes
achintyachaitanya · 6 years
Text
ಸೂಫಿ ಕವಿ, ಸೌಹಾರ್ದದ ಸಂಕೇತ; ಸ್ತ್ರೀಕುಲದ ಘನತೆ 'ಜೆಬುನ್ನೀಸಾ'
ಈ ಎಲ್ಲ ಘಟನಾವಳಿಗಳ ನಡುವೆಯೂ ಜೆಬಾಳಲ್ಲಿ ಪ್ರೇಮ ಜೀವಂತವಿತ್ತು. ಅವಳೊಳಗಿನ ಸೂಫೀಯತೆ ಅವಳನ್ನು ಎಲ್ಲ ಕಷ್ಟಗಳನ್ನು ನಗುತ್ತಲೇ ಸಹಿಸುವ ಬಲ ನೀಡಿತ್ತು. ಸರ್ವಧರ್ಮ ಸಮಭಾವ ಹೊಂದಿದ್ದ ಜೆಬುನ್ನಿಸಾ, ತಂದೆಯ ಕ್ರೂರ ನಿರ್ಬಂಧಗಳ ನಡುವೆಯೂ ಸೌಹಾರ್ದದ ಸಂಕೇತವಾಗಿ ಬಾಳಿದಳು
ಈ ಎಲ್ಲ ಘಟನಾವಳಿಗಳ ನಡುವೆಯೂ ಜೆಬಾಳಲ್ಲಿ ಪ್ರೇಮ ಜೀವಂತವಿತ್ತು. ಅವಳೊಳಗಿನ ಸೂಫೀಯತೆ ಅವಳನ್ನು ಎಲ್ಲ ಕಷ್ಟಗಳನ್ನು ನಗುತ್ತಲೇ ಸಹಿಸುವ ಬಲ ನೀಡಿತ್ತು. ಸರ್ವಧರ್ಮ ಸಮಭಾವ ಹೊಂದಿದ್ದ ಜೆಬ್, ತಂದೆಯ ಕ್ರೂರ ನಿರ್ಬಂಧಗಳ ನಡುವೆಯೂ ಸೌಹಾರ್ದದ ಸಂಕೇತವಾಗಿ ಬಾಳಿದಳು ~ ಅಲಾವಿಕಾ
Tumblr media
“ನಾನು ಬಾದಷಹನ ಮಗಳು, ವೈಭೋಗಗಳನ್ನು ತ್ಯಜಿಸಿದ್ದೇನೆ. ನನ್ನ ಹೆಸರು ಜೆಬುನ್ನೀಸಾ; ಘನತೆ ನನ್ನ ಹೆಸರಿನಲ್ಲಿಯೇ ಇದೆ. ನಾನು ಸ್ತ್ರೀಕುಲದ ಘನತೆ.” 17ನೇ ಶತಮಾನದ ಮುಘಲ್ ರಾಜಕುಮಾರಿಯೊಬ್ಬಳು ಹೀಗೆ ಘೋಷಿಸಿಕೊಂಡಿದ್ದಳು…
View On WordPress
0 notes
gspatilron-blog · 7 years
Photo
Tumblr media
ಅಖಿಲ ಕರ್ನಾಟಕ ಸರ್ವಧರ್ಮ ಶಾಂತಿ ಸಮ್ಮೇಳನ ಪವಿತ್ರ ಭಾರತದ ಸಂವಿಧಾನ ದೊಂದಿಗೆ ಸರ್ವಧರ್ಮ ಗ್ರಂಥಗಳ ಮೆರವಣಿಗೆ! ಫೆ.18 ರಂದು ಗಜೇಂದ್ರಗಡ ನಗರದಲ್ಲಿ ಜರುಗಲಿರಿವ ಸರ್ವ ಧರ್ಮ ಗುರುಗಳ ನೇತ್ರತ್ವದಲ್ಲಿ ಸೌಹಾರ್ದತೆ ಹಾಗು ಶಾಂತಿಗಾಗಿ ಪಾದಯಾತ್ರೆ!! #gspatilron #Indian National Congress - Karnataka #Indian National Congress #H.K.Patil Pwd minister Dr.H C Mahadevappa Dr H C mahadevappa followers
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
*ನಾಡಪ್ರಭು ಕೆಂಪೇಗೌಡರ ಹಾಗು ಮದಕರಿ ನಾಯಕರ* ಭಾವಚಿತ್ರದ ನಡುವೆ *ಹಲವು ಸಾಮ್ಯತೆ ಇದ್ದು* ಹಲವು ಬಾರಿ ಹಲವರು ತಪ್ಪಾಗಿ ಮದಕರಿ ನಾಯಕರ ಚಿತ್ರವನ್ನು ಕೆಂಪೇಗೌಡರ ಜಾಗದಲ್ಲಿ ಉಪಯೋಗಿಸಿದ ಇತಿಹಾಸ ಇದೆ ಅಂತಹ ತಪ್ಪು ಮರುಕಳಿಸುವುದು ಬೇಡ ಎಂಬ ಸದುದ್ದೇಶವಷ್ಟೆ...
ಚಿತ್ರ 1 ಮದಕರಿ ನಾಯಕ ಹಾಗು ಕೆಂಪೇಗೌಡರ ನಡುವಿನ ಚಿತ್ರ ವ್ಯತ್ಯಾಸ
ಚಿತ್ರ 2 ನೀವು ಬಳಸಬೇಕಾದ ಕೆಂಪೇಗೌಡರ ಚಿತ್ರ..
ನಮಸ್ಕಾರಗಳೊಂದಿಗೆ🙏
*ಸತೀಶ್ ಗೌಡ...*
[23/6 10:43 ಅಪರಾ Rotary Jaynagar distributed "FOOD PACKETS including Veg Pulav, laddu and banana to the residents of Jaynagar slum on 13th June Sunday. It was truly a sense of satisfaction to see the eyes of happiness among the crowd after receiving the food🤗🤗🤗
[24/6 6:02 ಅಪರಾಹ್ನ] +91 99864 03488: ರಾಜ್ಯದ ಉತ್ತರ ಭಾಗದಲ್ಲಿ *"ಕಾರ ಹುಣ್ಣಿಮೆ"* ಮಹೋತ್ಸವ ಹಲವು ವಿಶಿಷ್ಟ ಹಾಗೂ ವೈಶಿಷ್ಟ್ಯಪೂರ್ಣ ಇತಿಹಾಸ ಹೊಂದಿದೆ.
ಒಂದೇ ಪದಗಳಲ್ಲಿ ಹೇಳುವುದೇ ಆದರೆ *ಒಕ್ಕಲುತನದಲ್ಲಿ ನಮ್ಮ ಜತೆಗೂಡಿದ ನಮ್ಮೊಡನೆ ದುಡಿದು ದಣಿದ ರಾಸುಗಳಿಗೆ ಕೃತಜ್ಞಾತಾಪೂರ್ವಕ ಸಂಬ್ರಮವೆ ಈ ಕಾರ ಹುಣ್ಣಿಮೆ.*
ಯುಗಾದಿಯ ನಂತರ ಹಬ್ಬಗಳಿಲ್ಲದೇ ಭಣ ಭಣ ��ನ್ನುತ್ತಿರುವ ಒಕ್ಕಲು ಮಕ್ಕಳಿಗೆ ಕಾರ ಹುಣ್ಣಿಮೆಯು ಹಬ್ಬಗಳನ್ನು ಸಾಲು ಸಾಲಾಗಿ ಕರೆ ತರುವ ಹೆಬ್ಬಾಗಿಲಿದ್ದಂತೆ. ಕಾರ ಹುಣ್ಣುಮೆಯ ಆಗಮನಕ್ಕಾಗಿ ಕಾಯುತ್ತಿರುವ ನಾಗರ ಪಂಚಮಿ ‘ಬಂದ್ಯಾ ಬಂಗಾರದ ಕರಣಿ, ಕಾರುಣ್ಣಿ’ ಎಂದಿತಂತೆ ಅಕ್ಕರೆಯಿಂದ. ಅದಕ್ಕುತ್ತರವಾಗಿ ಕಾರ ಹುಣ್ಣಿಮೆ ‘ಬಂದೀನಿ ತಗೊಳೋ ನಿನ್ನ ಹಿಟ್ಟಿನ ಮೂಳನ ಹಡ್ಡಿ’ ಎಂದಿತಂತೆ ವ್ಯಂಗ್ಯವಾಗಿ.
ಹುಣ್ಣಿಮೆಗಿಂತೂ ಮೊದಲ ದಿನಕ್ಕೆ *‘ಹೊನ್ನ ಹುಗ್ಗಿ’* ಎಂದು ಕರೆಯುತ್ತಾರೆ. ಅಂದು ಜೋಳವನ್ನು ಕುಟ್ಟಿ ಮಾಡಿದ ಕಿಚಡಿಯನ್ನೇ ಮನೆದೇವರಿಗೆ ಸಂಜೆ ನೈವೇದ್ಯ ಮಾಡುತ್ತಾರಲ್ಲದೇ ಪೂಜೆಗೊಂಡ ಜಾನುವಾರುಗಳಿಗೂ ತಿನಿಸುತ್ತಾರೆ. ಕಾರ ಹುಣ್ಣಿಮೆಯ ದಿನ ಎಲ್ಲ ಜಾನುವಾರಗಳಿಗೂ ಜೋಳದ ಅಂಬಲಿ, ಗಾನದೆಣ್ಣೆ, ಅರಿಷಿಣ ಪುಡಿ (ಕೆಲವರು ಕೋಳಿಯ ತತ್ತಿಯನ್ನು ಹಾಕುತ್ತಾರೆ) ಸೇರಿಸಿ ಗೊಟ್ಟದ ಮೂಲಕ ಗಂಟಲಕ್ಕೆ ಸುರುವುತ್ತಾರೆ. ಮಳೆಗಾಲದ ತಂಪಿನ ವಾತಾವರಣಕ್ಕೆ ಜಾನುವಾರುಗಳೂ ಹೊಂದಿಕೊಳ್ಳಲು ಈ ವ್ಯವಸ್ಥೆ ಎನ್ನುತ್ತಾರೆ.
*ಕಾರ ಹುಣ್ಣಿಮೆ* ಅಪ್ಪಟ ರೈತರ ಹುಣ್ಣಿಮೆ. ಈ ಹುಣ್ಣಿಮೆಯ ದಿನ ರೈತರು ತಮ್ಮ ಮಳೆ ಬೆಳೆಯನ್ನು ತಿಳಿಯುವ ಕಾರ್ಣಿಕದ ಹಬ್ಬವೆಂಬಂತೆ ಆಚರಿಸುತ್ತಾರೆ. ತಮ್ಮ ಒಡನಾಡಿಗಳಾದ ಎತ್ತುಗಳಿಗೆ ಸಿಂಗಾರ ಮಾಡಿ ಓಡಿಸುವ ಮೂಲಕ ಕಾರಹುಣ್ಣಿಮೆ ಕರಿ ಹರಿಯುತ್ತಾರೆ.
ಮುಂಗಾರು ಮಳೆ ಆರಂಭವಾದ ನಂತರ ಬರುವ ಕಾರ ಹುಣ್ಣಿಮೆಯನ್ನು ಉತ್ತರ ಕರ್ನಾಟಕದಲ್ಲಿ ��ೈತರು ತಮ್ಮ ಹಬ್ಬವೆಂಬಂತೆ ಆಚರಿಸುತ್ತಾರೆ. ಕಾರ ಹುಣ್ಣಿಮೆಯ ದಿನ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಪೂಜಿಸುತ್ತಾರೆ.
ಎತ್ತು ಹುಸುಗಳನ್ನು ತೊಳೆದು ಸಿಂಗರಿಸಿ, ಕೊಂಬುಗಳನ್ನು ಕೆತ್ತಿಸಿದ ರೈತರು ಎತ್ತುಗಳಿಗೆ ಬಣ್ಣಗಳಿಂದ ಸಿಂಗಾರ ಮಾಡಿ ಸಂಜೆ ವೇಳೆಗೆ ತಮ್ಮ ಎತ್ತುಗಳ ಸಾಮಾರ್ಥ್ಯವನ್ನು ಅಳೆಯಲು ಓಡಿಸುತ್ತಾರೆ. ಈ ವೇಳೆ ಹಲವರು ಓಡುವ ಎತ್ತುಗಳನ್ನ ಹಿಡಿದು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಇದನ್ನೇ ಕರಿ ಹರಿಯುವುದು ಎಂದು ಕರೆಯುತ್ತಾರೆ.
ಗ್ರಾಮದ ಅಗಸಿಯ (ಚಾವಡಿ) ಮುಂದೆ ಬೇವಿನ ತಪ್ಪಲು, ನೇರಳೆ ಹಣ್ಣು, ಕೊಬ್ಬರಿಯನ್ನು ಪೋಣಿಸಿದ ಸರ ತಯಾರಿಸಿದ್ದು, ಅಗಸಿಗೆ ಅಡ್ಡವಾಗಿ ಈ ಸರವನ್ನು ಹಿಡಿಯುತ್ತಾರೆ. ಈ ಸಂದರ್ಭದಲ್ಲಿ ಎತ್ತುಗಳನ್ನು ಓಡಿಸುತ್ತಾ ಕೊನೆಗೆ ಅಗಸಿಯೊಳಗಾಗಿ ಓಡುವಂತೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಕೆಂದು ಬಣ್ಣದ ಎತ್ತು ಮೊದಲು ಬಂದರೆ ಕೆಂಪು ಕಾಳುಗಳು, ಬಿಳಿ ಎತ್ತು ಮೊದಲು ಬಂದರೆ ಬಿಳಿ ಧಾನ್ಯ ಉತ್ತಮವಾಗಿ ಬೆಳೆಯುತ್ತದೆ ಎಂದು ನಂಬಿಕೆಯಿದೆ. ಈ ವೇಳೆ ರಾಸುಗಳ ಓಟ ರೋಮಾಂಚನಕಾರಿಯಾಗಿರುತ್ತದೆ.
ರೈತ ಮತ್ತು ಜಾನುವಾರಗಳ ನಡುವಿನ ಬಾಂಧವ್ಯ ತಂದೆ ಮಕ್ಕಳ ಹಾಗೆ ಇರುತ್ತದೆ,ಮಕ್ಕಳ ಹುಟ್ಟು ಹಬ್ಬದ ಸಂಬ್ರಮದಂತೆ ಕೃಷಿಕರು ಜಾನುವಾರುಗಳನ್ನು ಸಿಂಗರಿಸಿ ಸಂಭ್ರಮಿಸುತ್ತಾರೆ.
ಕವಿ ದರಾ ಬೇಂದ್ರೆ ಹೇಳುವಂತೆ 
*ಹರಗೋಣ ಬಾ ಹೊಲ ಹೊಸದಾಗಿ
ಬಿದ್ದೈತೆ ಹ್ಯಾಗೋ ಕಾಲ್ ಕಸವಾಗಿ*
*ನಂಬಿಗಿಲೆ ದುಡೀತಾನ ಬಸವಣ್ಣ*
*ನಂಬಿಗ್ಯಾಗೈತೆ ಅವನ ಕಸುವಣ್ಣಾ*
*ಕಸುವೀಲೆ ಬೆಳೆಸೋಣ ಎತ್ತುಗೋಳು*
*ಎತ್ತಲ್ಲಾ ಅವು ನಮ್ಮ ಮುತ್ತುಗೋಳು*
ಎಲ್ಲಾ ಒಕ್ಕಲುತನದ ಬಂಧುಗಳಿಗೆ ಕಾರ ಹುಣ್ಣಿಮೆಯ ಶುಭಾಶಯಗಳು..
(ಸಂಗ್ರಹ ಬರಹ)
*ಸತೀಶ್ ಗೌಡ*✍8*
*ಅಧ್ಯಕ್ಷರು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್.*
*ನಿರ್ದೇಶಕ ಸ್ಥಾನದ ಅಭ್ಯರ್ಥಿ ರಾಜ್ಯ ಒಕ್ಕಲಿಗರ ಸಂಘ.*
*(ಮೈಸೂರು ಚಾಮರಾಜನಗರ)*
 
[26/6 6:54 ಪೂರ್ವಾಹ್ನ] Kempegowda Yuvashakti Vedike President: ಬೆಂಗಳೂರು ಮಹಾನಗರದ ಸೃಷ್ಟಿಕರ್ತ ಸರ್ವಧರ್ಮ ಸಮನಾಗಿ ಕಂಡ ಯುಗಪುರುಷ ಅನ್ನದಾತನ ನೆರಳಾದ ಸಾವಿರಾರು ಕೆರೆ ನಿರ್ಮಾಣ ಮಾಡಿದ ಕೆಚ್ಚೆದೆಯ ಕರುನಾಡ ಕರುಣಾಮಯಿ ಒಕ್ಕಲಿಗ ಕುಲ ತಿಲಕ ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿ ಜೂನ್ 27ರಂದು ಪ್ರತಿ ಮನೆಗಳಲ್ಲಿ ವಿಜೃಂಭಿಸಲಿ.
ಜೈ ಕೆಂಪೇಗೌಡ ಜೈ ಒಕ್ಕಲಿಗ.
✍️ ನಿಮ್ಮ ಪ್ರೀತಿಯ ಕೆಂಪೇಗೌಡ ಯುವಶಕ್ತಿ ಅನಿಲ್ ಗೌಡ್ರು.
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
[22/6 4:15 ಅಪರಾಹ್ನ] : ಕೇಳಿದ್ದು-
ಕಿಮ್ಸ ಆಸ್ಪತ್ರೆ ಔಷಧಿ ಅಂಗಡಿ ಭ್ರಷ್ಟಾಚಾರ !!!
ಮೂರು ಕೊಟಿ ಮುಂಗಡ ಒಂದು ವರ್ಷ ಕೊಟ್ಟಿದ್ದ ಹಿಂದಿನ ವ್ಯಾಪಾರಿ
ಬೆಟ್ಟೇಗೌಡ 1 ಕೋಟಿ ಲಂಚ ತಗೊಂಡು, ಎರಡು ಕೋಟಿ ಮುಂಗಡಕ್ಕೆ ಎರಡನೇ ವರ್ಷದ ಒಪ್ಪಂದ
ಈಗ ತಿಮ್ಮೇಗೌಡ+ ಡಾ.ಭಗವಾನ್ ಕಂಪನಿ ಒವರ್ಸೀಸ್ ಫಾರ್ಮಗೆ ಪ್ರಿನ್ಸಿಪಾಲರಿಂದ ಒಪ್ಪಂದ . ಮೂರು ತಿಂಗಳಾದರೂ ಬಾಡಿಗೇನೂ ಕೊಟ್ಟಿಲ್ಲವಂತೆ !!!
ಇದರ ಎಲ್ಲಾ ಆಯಾಮಗಳ ಸತ್ಯ ಚರ್ಚೆ ಮಾಡೋಣ
[24/6 6:02 ಅಪರಾಹ್ನ ರಾಜ್ಯದ ಉತ್ತರ ಭಾಗದಲ್ಲಿ *"ಕಾರ ಹುಣ್ಣಿಮೆ"* ಮಹೋತ್ಸವ ಹಲವು ವಿಶಿಷ್ಟ ಹಾಗೂ ವೈಶಿಷ್ಟ್ಯಪೂರ್ಣ ಇತಿಹಾಸ ಹೊಂದಿದೆ.
ಒಂದೇ ಪದಗಳಲ್ಲಿ ಹೇಳುವುದೇ ಆದರೆ *ಒಕ್ಕಲುತನದಲ್ಲಿ ನಮ್ಮ ಜತೆಗೂಡಿದ ನಮ್ಮೊಡನೆ ದುಡಿದು ದಣಿದ ರಾಸುಗಳಿಗೆ ಕೃತಜ್ಞಾತಾಪೂರ್ವಕ ಸಂಬ್ರಮವೆ ಈ ಕಾರ ಹುಣ್ಣಿಮೆ.*
ಯುಗಾದಿಯ ನಂತರ ಹಬ್ಬಗಳಿಲ್ಲದೇ ಭಣ ಭಣ ಎನ್ನುತ್ತಿರುವ ಒಕ್ಕಲು ಮಕ್ಕಳಿಗೆ ಕಾರ ಹುಣ್ಣಿಮೆಯು ಹಬ್ಬಗಳನ್ನು ಸಾಲು ಸಾಲಾಗಿ ಕರೆ ತರುವ ಹೆಬ್ಬಾಗಿಲಿದ್ದಂತೆ. ಕಾರ ಹುಣ್ಣುಮೆಯ ಆಗಮನಕ್ಕಾಗಿ ಕಾಯುತ್ತಿರುವ ನಾಗರ ಪಂಚಮಿ ‘ಬಂದ್ಯಾ ಬಂಗಾರದ ಕರಣಿ, ಕಾರುಣ್ಣಿ’ ಎಂದಿತಂತೆ ಅಕ್ಕರೆಯಿಂದ. ಅದಕ್ಕುತ್ತರವಾಗಿ ಕಾರ ಹುಣ್ಣಿಮೆ ‘ಬಂದೀನಿ ತಗೊಳೋ ನಿನ್ನ ಹಿಟ್ಟಿನ ಮೂಳನ ಹಡ್ಡಿ’ ಎಂದಿತಂತೆ ವ್ಯಂಗ್ಯವಾಗಿ.
ಹುಣ್ಣಿಮೆಗಿಂತೂ ಮೊದಲ ದಿನಕ್ಕೆ *‘ಹೊನ್ನ ಹುಗ್ಗಿ’* ಎಂದು ಕರೆಯುತ್ತಾರೆ. ಅಂದು ಜೋಳವನ್ನು ಕುಟ್ಟಿ ಮಾಡಿದ ಕಿಚಡಿಯನ್ನೇ ಮನೆದೇವರಿಗೆ ಸಂಜೆ ನೈವೇದ್ಯ ಮಾಡುತ್ತಾರಲ್ಲದೇ ಪೂಜೆಗೊಂಡ ಜಾನುವಾರುಗಳಿಗೂ ತಿನಿಸುತ್ತಾರೆ. ಕಾರ ಹುಣ್ಣಿಮೆಯ ದಿನ ಎಲ್ಲ ಜಾನುವಾರಗಳಿಗೂ ಜೋಳದ ಅಂಬಲಿ, ಗಾನದೆಣ್ಣೆ, ಅರಿಷಿಣ ಪುಡಿ (ಕೆಲವರು ಕೋಳಿಯ ತತ್ತಿಯನ್ನು ಹಾಕುತ್ತಾರೆ) ಸೇರಿಸಿ ಗೊಟ್ಟದ ಮೂಲಕ ಗಂಟಲಕ್ಕೆ ಸುರುವುತ್ತಾರೆ. ಮಳೆಗಾಲದ ತಂಪಿನ ವಾತಾವರಣಕ್ಕೆ ಜಾನುವಾರುಗಳೂ ಹೊಂದಿಕೊಳ್ಳಲು ಈ ವ್ಯವಸ್ಥೆ ಎನ್ನುತ್ತಾರೆ.
*ಕಾರ ಹುಣ್ಣಿಮೆ* ಅಪ್ಪಟ ರೈತರ ಹುಣ್ಣಿಮೆ. ಈ ಹುಣ್ಣಿಮೆಯ ದಿನ ರೈತರು ತಮ್ಮ ಮಳೆ ಬೆಳೆಯನ್ನು ತಿಳಿಯುವ ಕಾರ್ಣಿಕದ ಹಬ್ಬವೆಂಬಂತೆ ಆಚರಿಸುತ್ತಾರೆ. ತಮ್ಮ ಒಡನಾಡಿಗಳಾದ ಎತ್ತುಗಳಿಗೆ ಸಿಂಗಾರ ಮಾಡಿ ಓಡಿಸುವ ಮೂಲಕ ಕಾರಹುಣ್ಣಿಮೆ ಕರಿ ಹರಿಯುತ್ತಾರೆ.
ಮುಂಗಾರು ಮಳೆ ಆರಂಭವಾದ ನಂತರ ಬರುವ ಕಾರ ಹುಣ್ಣಿಮೆಯನ್ನು ಉತ್ತರ ಕರ್ನಾಟಕದಲ್ಲಿ ರೈತರು ತಮ್ಮ ಹಬ್ಬವೆಂಬಂತೆ ಆಚರಿಸುತ್ತಾರೆ. ಕಾರ ಹುಣ್ಣಿಮೆಯ ದಿನ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಪೂಜಿಸುತ್ತಾರೆ.
ಎತ್ತು ಹುಸುಗಳನ್ನು ತೊಳೆದು ಸಿಂಗರಿಸಿ, ಕೊಂಬುಗಳನ್ನು ಕೆತ್ತಿಸಿದ ರೈತರು ಎತ್ತುಗಳಿಗೆ ಬಣ್ಣಗಳಿಂದ ಸಿಂಗಾರ ಮಾಡಿ ಸಂಜೆ ವೇಳೆಗೆ ತಮ್ಮ ಎತ್ತುಗಳ ಸಾಮಾರ್ಥ್ಯವನ್ನು ಅಳೆಯಲು ಓಡಿಸುತ್ತಾರೆ. ಈ ವೇಳೆ ಹ��ವರು ಓಡುವ ಎತ್ತುಗಳನ್ನ ಹಿಡಿದು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಇದನ್ನೇ ಕರಿ ಹರಿಯುವುದು ಎಂದು ಕರೆಯುತ್ತಾರೆ.
ಗ್ರಾಮದ ಅಗಸಿಯ (ಚಾವಡಿ) ಮುಂದೆ ಬೇವಿನ ತಪ್ಪಲು, ನೇರಳೆ ಹಣ್ಣು, ಕೊಬ್ಬರಿಯನ್ನು ಪೋಣಿಸಿದ ಸರ ತಯಾರಿಸಿದ್ದು, ಅಗಸಿಗೆ ಅಡ್ಡವಾಗಿ ಈ ಸರವನ್ನು ಹಿಡಿ��ುತ್ತಾರೆ. ಈ ಸಂದರ್ಭದಲ್ಲಿ ಎತ್ತುಗಳನ್ನು ಓಡಿಸುತ್ತಾ ಕೊನೆಗೆ ಅಗಸಿಯೊಳಗಾಗಿ ಓಡುವಂತೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಕೆಂದು ಬಣ್ಣದ ಎತ್ತು ಮೊದಲು ಬಂದರೆ ಕೆಂಪು ಕಾಳುಗಳು, ಬಿಳಿ ಎತ್ತು ಮೊದಲು ಬಂದರೆ ಬಿಳಿ ಧಾನ್ಯ ಉತ್ತಮವಾಗಿ ಬೆಳೆಯುತ್ತದೆ ಎಂದು ನಂಬಿಕೆಯಿದೆ. ಈ ವೇಳೆ ರಾಸುಗಳ ಓಟ ರೋಮಾಂಚನಕಾರಿಯಾಗಿರುತ್ತದೆ.
ರೈತ ಮತ್ತು ಜಾನುವಾರಗಳ ನಡುವಿನ ಬಾಂಧವ್ಯ ತಂದೆ ಮಕ್ಕಳ ಹಾಗೆ ಇರುತ್ತದೆ,ಮಕ್ಕಳ ಹುಟ್ಟು ಹಬ್ಬದ ಸಂಬ್ರಮದಂತೆ ಕೃಷಿಕರು ಜಾನುವಾರುಗಳನ್ನು ಸಿಂಗರಿಸಿ ಸಂಭ್ರಮಿಸುತ್ತಾರೆ.
ಕವಿ ದರಾ ಬೇಂದ್ರೆ ಹೇಳುವಂತೆ 
*ಹರಗೋಣ ಬಾ ಹೊಲ ಹೊಸದಾಗಿ
ಬಿದ್ದೈತೆ ಹ್ಯಾಗೋ ಕಾಲ್ ಕಸವಾಗಿ*
*ನಂಬಿಗಿಲೆ ದುಡೀತಾನ ಬಸವಣ್ಣ*
*ನಂಬಿಗ್ಯಾಗೈತೆ ಅವನ ಕಸುವಣ್ಣಾ*
*ಕಸುವೀಲೆ ಬೆಳೆಸೋಣ ಎತ್ತುಗೋಳು*
*ಎತ್ತಲ್ಲಾ ಅವು ನಮ್ಮ ಮುತ್ತುಗೋಳು*
ಎಲ್ಲಾ ಒಕ್ಕಲುತನದ ಬಂಧುಗಳಿಗೆ ಕಾರ ಹುಣ್ಣಿಮೆಯ ಶುಭಾಶಯಗಳು..
(ಸಂಗ್ರಹ ಬರಹ)
*ಸತೀಶ್ ಗೌಡ*✍
*9986403488*
*ಅಧ್ಯಕ್ಷರು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್.*
*ನಿರ್ದೇಶಕ ಸ್ಥಾನದ ಅಭ್ಯರ್ಥಿ ರಾಜ್ಯ ಒಕ್ಕಲಿಗರ ಸಂಘ.*
*(ಮೈಸೂರು ಚಾಮರಾಜನಗರ)*
 
[26/6 7:41 ಪೂರ್ವಾಹ್ನ] : ಬೆಂಗಳೂರು ಮಹಾನಗರದ ಸೃಷ್ಟಿಕರ್ತ ಸರ್ವಧರ್ಮ ಸಮನಾಗಿ ಕಂಡ ಯುಗಪುರುಷ ಅನ್ನದಾತನ ನೆರಳಾದ ಸಾವಿರಾರು ಕೆರೆ ನಿರ್ಮಾಣ ಮಾಡಿದ ಕೆಚ್ಚೆದೆಯ ಕರುನಾಡ ಕರುಣಾಮಯಿ ಒಕ್ಕಲಿಗ ಕುಲ ತಿಲಕ ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿ ಜೂನ್ 27ರಂದು ಪ್ರತಿ ಮನೆಗಳಲ್ಲಿ ವಿಜೃಂಭಿಸಲಿ.
ಜೈ ಕೆಂಪೇಗೌಡ ಜೈ ಒಕ್ಕಲಿಗ.
✍️ ನಿಮ್ಮ ಪ್ರೀತಿಯ ಒಕ್ಕಲಿಗ ಮಹಾಸಭಾ ಟಿ,ಜಗದೀಶ್ ಗೌಡ
0 notes
chamundinews · 4 years
Text
ಆಹಾರ ಧಾನ್ಯಗಳ ಕಿಟ್ ವಿತರಣೆ!
Tumblr media Tumblr media
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿರುವ ಮಹಾಲಿಂಗಪುರ ಗ್ರಾಮದಲ್ಲಿ ಸರ್ವರನ್ನು ಪ್ರೀತಿಸುವ ಸರ್ವಧರ್ಮ ನಾಯಕಿಯರಾದ ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಉಮಾಶ್ರೀ ರವರು ಮಹಾಲಿಂಗಪುರದ ಗೂಡಂಗಡಿ ಓಣಿಯಲ್ಲಿ ಬೀದಿ ವ್ಯಾಪಾರ ಮಾಡುವ ಹಾಗೂ ಆಟೋ ಚಾಲಕರ ನೆರವಿಗೆ ನಿಂತ ಉಮಾಶ್ರೀಯವರು ಆಹಾರ ಧಾನ್ಯಗಳ ಕಿಟ್ಟ ವಿತರಿಸಿದರು. ವರದಿ:ರಮೇಶ ಶಿ. ಗಲಗಲಿ ಚಾಮುಂಡಿ ನ್ಯೂಸ್ ಬಾಗಲಕೋಟೆ Read the full article
0 notes
chamundinews · 5 years
Text
ಕೃಷ್ಣರಾಜಪೇಟೆ: ಸರ್ವಧರ್ಮ ಸಮ್ಮೇಳನದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ!
Tumblr media Tumblr media
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಂದಗೆರೆ ಸಮೀಪದ ಹೊನ್ನೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಸೂಫಿ ಸಂತರಾದ ಶ್ರೀ ಗುರುಹಜರತ್ ಖ್ವಾಜಾ ಷಾಅಹಮದ್ ಉಲ್ಲಾಷಾ ಅವರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀಗೌಸ್ ಆಜಾಮ್ ಅವರ ದೀಪೋತ್ಸವ ಪ್ರಯುಕ್ತ ಸರ್ವಧರ್ಮ ಸಮ್ಮೇಳನದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
Tumblr media
ಚಿಕ್ಕಮಗಳೂರಿನ ಬಸವ ತತ್ವಪೀಠದ ಪೂಜ್ಯ ಶ್ರೀಜಯಬಸವಾನಂದ ಶ್ರೀಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಹಿಂದೂ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಸೇರಿದಂತೆ ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಬೇಕಾಗಿರುವುದು ನಿಷ್ಕಲ್ಮಷವಾದ ಪೂಜೆ, ಪುರಸ್ಕಾರ ಹಾಗೂ ಭಕ್ತಿಯಾಗಿದೆ.. ಆಡಂಬರದ ಪೂಜೆ ಪುರಸ್ಕಾರಗಳಲ್ಲ.ಆದ್ದರಿಂದ ನಾವೆಲ್ಲರೂ ಹಿಂದೂ ಮುಸ್ಲಿಂ ಎಂಬ ಬೇಧಭಾವವಿಲ್ಲದೇ ಎಲ್ಲರೂ ಒಂದಾಗಿ ಸಹೋದರತ್ವದ ಸಂಕೇತವಾಗಿ ಒಂದಾಗಿ ಕೂಡಿ ಬಾಳುವುದನ್ನು ಕಲಿಯಬೇಕು...ವಿಶ್ವದಲ್ಲಿಯೇ ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ಯಾವುದೂ ಇಲ್ಲವಾದ್ದರಿಂದ ಮಾನವತೆಗೆ ಒತ್ತುನೀಡಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಜೀವನ ನಡೆಸಬೇಕು ಎಂದು ಶ್ರೀಗಳು ಕರೆ ನೀಡಿದರು. ಹಾಸನದ ಕ್ರೈಸ್ತ ಧರ್ಮಗುರುಗಳಾದ ರೆವರೆಂಡ್ ಫಾದರ್ ಶ್ರೀನಿವಾಸಮೂರ್ತಿ ಧಾರ್ಮಿಕ ಪ್ರವಚನ ನೀಡಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮವಾಗಿದೆ. ಆದ್ದರಿಂದ ಮಾನವರಾದ ನಾವು ಸ್ವಾರ್ಥಿಗಳಾಗದೇ ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಖ್ವಾಜಾ..ಷಾ ಅಹಮದುಲ್ಲಾ..ಷಾ ಮಾತನಾಡಿ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಧಾರ್ಮಿಕ ಪ್ರವಚನವನ್ನು ಆಲಿಸಿ ಒತ್ತಡಗಳಿಂದ ಮುಕ್ತರಾಗಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಾಧನೆ ಮಾಡಲು ಕಷ್ಠವಾದರೂ ನ್ಯಾಯ, ನೀತಿ ಮತ್ತು ಧರ್ಮದ ಹಾದಿಯಲ್ಲಿಯೇ ಸಾಗಿ ಯಶಸ್ಸನ್ನು ಗಳಿಸೋಣ ಎಂದು ಹೇಳಿದರು.ಕರ್ನಾಟಕ ರಾಜ್ಯ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ , ಕರ್ನಾಟಕ ರಾಜ್ಯ ರೈತಸಂಘದ ಉಪಾಧ್ಯಕ್ಷ ಆನೆಕೆರೆ ರವಿ, ಸಿದ್ಧವೀರಪ್ಪ, ಬಸವರಾಜಪ್ಪ, ರಾಜ್ಯಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ, ಹಾಸನ ಜಿಲ್ಲಾ ರೈತಸಂಘದ ಅಧ್ಯಕ್ಷ ಮೆಹಬೂಬ್ ಪಾಷಬಾಬು, ದಲಿತ ಮುಖಂಡ ಕೃಷ್ಣ, ಮಹೇಶ್, ದುರ್ಗಪ್ಪಗೌಡ, ಕಬ್ಬಳಿಗೆರೆ ಮಂಜುನಾಥ್, ಬೋರನಕೊಪ್ಪಲು ಜಯರಾಂ, ಧರ್ಮ ಗುರುಗಳಾದ ಮೆಹಬೂಬ್ ಉಲ್ಲಾಷಾ, ಸೈಫ್ ಅಲ್ಲಾಷಾ, ಅಜೋಜ್ ಉಲ್ಲಾಷಾ, ಶಬ್ಬೀರ್ ಅಲಿಷಾ, ಮುಬೀರ್ ಷಾ, ಮೊಹಮ್ಮದ್ ನಸ್ರುಲ್ಲಾ ಅನ್ಸಾರಿ ಸೇರಿದಂತೆ ಸಾವಿರಾರು ಜನರು ಧಾರ್ಮಿಕ ಪ್ರವಚನ ಹಾಗೂ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ:ಶಂಭು ಕಿಕ್ಕೇರಿ ಚಾಮುಂಡಿ ನ್ಯೂಸ್ ಮಂಡ್ಯ Read the full article
0 notes
chamundinews · 5 years
Text
ಪಠ್ಯಪುಸ್ತಕದಿಂದ ಟಿಪ್ಪುವಿನ ಇತಿಹಾಸವನ್ನು ಕೈಬಿಡುವುದನ್ನು ಪ್ರಶ್ನಿಸಿ ದಲಿತ ಹಾಗೂ ಟಿಪ್ಪು ಸಂಘಟನೆಗಳು ಪ್ರತಿಭಟನೆ!
Tumblr media Tumblr media
ನಂಜನಗೂಡು: ಯಡಿಯೂರಪ್ಪ ನೈತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸರ್ಕಾರದಲ್ಲಿ ಪ್ರಸ್ತಾವನೆಯಲ್ಲಿರುವ ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸವನ್ನು ಕೈ ಬಿಡುವ ನಿರ್ಧಾರವನ್ನು ಖಂಡಿಸಿ ನಂಜನಗೂಡು ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಸಂಘರ್ಷ ಸಮಿತಿ ಹಾಗೂ ಮುಸ್ಲಿಮ್ ಭಾಂದವರು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಚೊರನಹಳ್ಳಿ ಶಿವಣ್ಣ ಮಾತನಾಡಿ ರಾಜ್ಯದ ಬಿಜೆಪಿ ಸರ್ಕಾರವು ಅನವಶ್ಯಕವಾಗಿ ಅಪ್ಪಟ ದೇಶಪ್ರೇಮಿ ಜನಪರ ಆಡಳಿತ ನೀಡಿದ ಟಿಪ್ಪು ಸುಲ್ತಾನನ್ನು ಇತಿಹಾಸವನ್ನು ಪಠ್ಯಪುಸ್ತಕದಿಂದ ಕೈಬಿಡುವುದು ಸರಿಯಲ್ಲ ಅವರು ಪುರಾಣ ಪುಣ್ಯ ಕತೆಯ ವ್ಯಕ್ತಿ ಅಲ್ಲ ನೈಜ್ಯ ಇತಿಹಾಸವುಳ್ಳ ವ್ಯಕ್ತಿ ಮರೆಮಾಚಲು ಸಾಧ್ಯವಿಲ್ಲ ಹಲವಾರು ದೇವಸ್ಥಾನಗಳಿಗೆ ಕೊಡುಗೆ ನೀಡಿದ್ದಾರೆ ನಂಜನಗೂಡು ಶೃಂಗೇರಿ ದೇವಸ್ಥಾನದಲ್ಲಿ ಇವತ್ತಿಗು ಕಾಣಬಹುದು ಸರ್ವಧರ್ಮ ಪರವಾಗಿ ಆಡಳಿತ ನಡೆಸಿದ್ದಾರೆ. ಅವರ ಆಡಳಿತಾವಧಿಯಲ್ಲಿ ಮಧ್ಯಪನ ನಿಷೇಧಮಾಡಿದರು, ಕನ್ನಂಬಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ, ಆರ್ಥಿಕ ಬೆಳೆಗಳನ್ನು ಪರಿಚಯಿಸಿದರು, ಬ್ರಿಟಿಷರಿಗೆ ಕಪ್ಪ ಕಾಣಿಕೆ ನೀಡದೆ ನಾಲ್ಕು ಯುದ್ದ ಮಾಡಿದರು. ಇವತ್ತಿನ ರಾಜಕಾರಣಿ ತಮ್ಮ ಮಕ್ಕಳಿಗಳಿಗೊಸ್ಕರ ದೇಶ ಮಾರುತ್ತಿದ್ದಾರೆ ಆದರೆ ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟನು. ಯಡಿಯೂರಪ್ಪನವರು ಕೆಜೆಪಿಯಲ್ಲಿದ್ದಾಗ ಟಿಪ್ಪುನನ್ನು ಜಪಿಸುತ್ತಿದ್ದರು ಬಿಜೆಪಿಗೆ ಹೊಗಿ ಕೋಮುವಾದಿಯಾಗಿದ್ದಾರೆ. ನಮ್ಮ ರಾಷ್ಟ್ರಪತಿಗಳು ಟಿಪ್ಪುನಾ ಗೌರವಿಸಿದ್ದಾರೆ. ಸಂವಿಧಾನ 144 ನೇ ಪುಟದಲ್ಲಿ ಟಿಪ್ಪುವಿನ ರೇಖಾಚಿತ್ರವಿದೆ ಹಾಗಾದರೆ ಸಂವಿಧಾನದ 144 ನೆಯ ಪುಟವನ್ನು ಕೈಬಿಡುತ್ತಿರ ಎಂದು ಪ್ರಶ್ನಿಸಿದರು. ಒಂದು ವೇಳೆ ಪಠ್ಯದಿಂದ ಟಿಪ್ಪುವಿನ ಚರಿತ್ರೆ ಕೈಬಿಟ್ಟರೆ ದೇಶಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ರು. ಈ ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಸಂಚಾಲಕರಾದ ದೇವೆಂದ್ರ, ಸಂತೋಷ ತಳೂರು, ಅಂಬೇಡ್ಕರ್ ಸೇನೆಯ ಜಿಲ್ಲಾ ಅಧ್ಯಕ್ಷರಾದ ನಾಗೇಂದ್ರ ಬಸವಟ್ಟಿಗೆ, ಸಿದ್ಧಿಖ್ ನೀಲಕಂಠನಗರ, ಟಿಪ್ಪು ಸಂಘದ ಅಧ್ಯಕ್ಷರಾದ ಪರ್ದ್ರಿಶ್ ಷರಿಪ್, ಅಬ್ದುಲ್ ಗಣಿ, ಅಫ್ಸರ್, ಜಾಭಿಲ್,  ಪರ್ವಿಶ್, ಹಿಲಿಯಾಜ್, ನಗರ ಸಭ ಸದಸ್ಯರಾದ ಖಾಲಿದ್, ಶಿವರಾಜ್, ನಗರ್ಲೆ ಪ್ರಕಾಶ್, ಮೂಡಹಳ್ಳಿ ಮಹದೇವ್ ಸ್ವಾಮಿ ಪ್ರತಿಭಟನೆಯಲ್ಲಿ ಹಾಜರಿದ್ದರು. Read the full article
0 notes
satwadharanews-blog · 7 years
Text
ಸ್ಕೌಟ್ಸ್ ಸಂಸ್ಥಾಪಕ: ಬೇಡನ್ ಪೊವೆಲ್ ದಿನಾಚರಣೆ
ಕುಮಟಾ: ಇಲ್ಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಜನತಾ ವಿದ್ಯಾಲಯ ಮಿರ್ಜಾನಿನ ಕೆನಡಿ-ನೆಹರು ಸಭಾಭವನದಲ್ಲಿ ಸ್ಕೌಡ್ಸ್ ಸಂಸ್ಥಾಪಕ ಬೇಡನ್ ಪೊವೆಲ್ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮದ ಆರಂಭದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಹಿರಿಯ ಸ್ಕೌಟ್ ಅಂತರಾಷ್ಟ್ರೀಯ ಸಾಧಕ ಶಿಕ್ಷಕ ರಾಜು ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಾನಿಕ ಘಟಕದ ಅಧ್ಯಕ್ಷ ಅತುಲ್ ಕಾಮತ ಅವರು ನೂತನವಾಗಿ ಆಯ್ಕೆಯಾದ ಗಿಬ್ ವಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕ…
View On WordPress
0 notes
satwadharanews-blog · 7 years
Text
ಟಿಪ್ಪು ಸುಲ್ತಾನ್ ಸರ್ವಧರ್ಮ ಸಮಾನತೆ ಕಾಪಾಡಿದ ಮಹಾನ್ ವ್ಯಕ್ತಿ: ಶಾಸಕ ಹೆಬ್ಬಾರ್
ಯಲ್ಲಾಪುರ; ಮೈಸೂರು ಹುಲಿ ಪ್ರಖ್ಯಾತಿ ಪಡೆದ ಟಿಪ್ಪು ಸುಲ್ತಾನ್ ಸರ್ವಧರ್ಮ ಸಮಾನತೆ ಕಾಪಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ , ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸುವ ಉದ್ದೇಶ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಶುಕ್ರವಾರ ಬೆಳಗ್ಗೆ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆಯನ್ನು ತಾಲೂಕ ಪಂಚಾಯತ್ ಸಭಾ ಭವನದ ಗಾಂಧಿ ಕುಟೀರದಲ್ಲಿ…
View On WordPress
0 notes