Tumgik
#ದನ
Text
ಅವರ ನಿಧನದ ದಿನ ಸುಶಾಂತ್ ಪರಿಸ್ಥಿತಿ ಹೀಗಿತ್ತಾ?
ಅವರ ನಿಧನದ ದಿನ ಸುಶಾಂತ್ ಪರಿಸ್ಥಿತಿ ಹೀಗಿತ್ತಾ?
ಸುಶಾಂತ್ ಸಿಂಗ್ ಅಂತಿಮ ವಿಡಿಯೋ: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವು ಎರಡೂವರೆ ವರ್ಷಗಳ ನಂತರ ಮತ್ತೊಮ್ಮೆ ಮುಖ್ಯಾಂಶಗಳಲ್ಲಿದೆ. ಅಂತಿಮ ದಿನ, ಶವಾಗಾರದ ಕೆಲಸಗಾರನು ತನ್ನ ಸಮರ್ಥನೆಯ ಜೊತೆಗೆ ಭಯವನ್ನು ಸೃಷ್ಟಿಸಿದನು. ಸುಶಾಂತ್ ಅವರ ನಿರ್ಜೀವ ಮೈಕಟ್ಟು ಮೇಲೆ ಅನೇಕ ಗುರುತುಗಳಿವೆ ಎಂದು ಕಾರ್ಮಿಕರು ಹೇಳಿಕೊಂಡಿದ್ದಾರೆ, ಅದನ್ನು ನೋಡಿ ಅದು ಆತ್ಮಹತ್ಯೆಯಲ್ಲ ಆದರೆ ‘ನರಹತ್ಯೆ’ ಎಂದು ಅವರಿಗೆ ಅರ್ಥವಾಯಿತು. ಅಂದಿನಿಂದ, ನಟನ ಮನೆಯವರು ಮತ್ತು ಅನುಯಾಯಿಗಳು ಪ್ರಕರಣದ ಮರು ತನಿಖೆಗೆ…
Tumblr media
View On WordPress
0 notes
aakrutikannada · 4 months
Text
'ಉರಿವ ಕೆಂಡವಾದ ಧರೆ' ಕವನ
ಕೆರೆ ಕಟ್ಟೆಗಳು ಬತ್ತಿ ದನ ಕರುಗಳು ನೀರಿಲ್ಲದೆ ಒದ್ದಾಡುತ್ತಿರುವವಲ್ಲ ! ಅಯ್ಯೋ ಎಂದು ಮೊರೆಯಿಟ್ಟರೂ ನಮ್ಮನ್ನು ಯಾರೂ ಕೇಳುವರಿಲ್ಲ !…ಪ್ರೊ. ಸಿದ್ದು ಸಾವಳಸಂಗ ಅವರ ಬರಗಾಲದ ಕುರಿತಾದ ಕವಿತೆಯನ್ನು ತಪ್ಪದೆ ಮುಂದೆ ಓದಿ… ಬಿಸಿಲಧಗೆ ಹೊಗೆಯಾಗಿ ಉಸಿರ ಕಟ್ಟುತಿಹುದಲ್ಲ ! ಈ ಧರೆ ಉರಿವ ಕೆಂಡವಾಗಿ ಮನುಜನ ಸುಡುತಿಹುದಲ್ಲ !! ಗಿಡ ಮರಗಳ ಎಲೆಗಳು ಎಲ್ಲಿಯೂ ಅಲುಗಾಡುತ್ತಿಲ್ಲ ! ಪಶು ಪಕ್ಷಿಗಳಿಗೆ ಕುಡಿಯುವ ನೀರಿಲ್ಲದೆ ಒದ್ದಾಡುತ್ತಿರುವವಲ್ಲ !! ಹೊಸ್ತಿಲು ದಾಟಿ ಮನುಜ ಹೊರಗೆ ಕಾಲಿಡಲಾಗುತ್ತಿಲ್ಲ…
Tumblr media
View On WordPress
0 notes
neerama · 10 months
Text
ಕಾರ್ತೀಕ ದೀಪ.
ದೀಪಾವಳಿ ಎಂದರೇ ಸಡಗರ.ಅಕ್ಟೋಬರ್ ೨ ರಿಂದ ಶುರುವಾದ ನವರಾತ್ರಿ ರಜೆ ಮುಗಿಯುವುದೇ ದೀಪಾವಳಿಯ ನಂತರ.ಮೊದಲ ವಾರದಲ್ಲೇ ಮಾಸ್ಟರು ಕೊಟ್ಟ ಎಲ್ಲ ಬರವಣಿಗೆಗಳ ಮುಗಿಸಿ, ಪುಸ್ತಕಗಳ ಕಟ್ಟಿ ಮಾಳಿಗೆ ಮನೆಯೊಳಗಿನ ನಾಗಂದಿಗೆ ಮೇಲೆ ಸೇರಿಸಿದರೆ ಮತ್ತೆ ತೆಗೆಯುವುದು ಶಾಲೆ ಶುರುವಾಗುವ ಹಿಂದಿನ‌ದಿನವೆ.
ಮೊದಲ ವಾರದಲ್ಲಿ ಮಾವನ ಮನೆ ಇಂದ ಅಪ್ಪನ ಮನೆಗೆ ಹೋಗುವ ತವಕ.ಮಾವನು ಕಳಿಸಿದ ಮರಿಯಾಚಾರಿ ಜೊತೆ ಕಾಡಿನ ಹಾದಿಯಲ್ಲಿ ,ಅರವತ್ತು ಮರದ ಓಣಿಯಲ್ಲಿ ನಮ್ಮ ನಡಿಗೆಯ ಪಯಣ. ಅರವತ್ತು ಮರದ ಓಣಿಯಲ್ಲಿ ಹಿಡಿದ  ಉಸಿರು ಬಿಡುವುದೇ ಅದ ದಾಟಿ ಈಚೆ ಬಂದ ನಂತರ. ಅಷ್ಟು ಬಯಂಕರ ಕಾಡಿನ‌ ಓಣಿ,ಜೊತೆಯಲ್ಲಿ ನೆನಪಾಗುವ ಹೆಗ್ಗದ್ದೆ ದೊಡ್ಡಮ್ಮ ಹೇಳಿದ ದೆವ್ವದ ಕಥೆಗಳು.ಓಣಿ ದಾಟಿದ ನಂತರ ಕಟ್ಟಿದ ಉಚ್ಚೆ ಹೊರಬಿಡಲು ೫ ನಿಮಿಷ.ಆದರೆ ಹಿಂದೆಯೇ ಮರಿಯಾಚಾರಿ ನಿಂತಿರ ಬೇಕಿತ್ತು. ನಡೆಯಲು ಆಗುವುದಿಲ್ಲ ಎಂದು ಹಠಮಾಡಿ ಮರಿಯಾಚಾರಿ ಹೆಗಲಮೇಲೆ ಏರಿ ಪಯಣ.ಮಾವನ‌ಮನೆಯಲ್ಲಿ‌ಕೆಲಸ ಮಾಡುವವರ ನಿಯತ್ತೇ ಹಾಗಿತ್ತು, ನಮ್ಮ ಕೂದಲು ಕೊಂಕದಂತೆ ಜೋಪಾನ ಮಾಡುತ್ತಿದ್ದರು.ಅಮ್ಮಯ್ಯಮ್ಮನ ಮಕ್ಕಳ ಜೋಪಾನ ಮಾಡಿದ ಪರಿಯೇ ಹಾಗೆ.ಇದಕ್ಕೆ ಸಿಂಗ ,ಸುಬ್ಬು ,ಆಚೆಮನೆ ಗುಂಡನೂ ಹೊರತಲ್ಲ ,ಎಲ್ಲಿರುವರೋ, ಹೇಗಿರುವರೋ ಗೊತ್ತಿಲ್ಲ, ನೆನಪಿನ‌ಬುತ್ತಿಯಲಿ ಸದಾ ನೆಲಸಿರುವರು. ಅಂತೂ ಅಪ್ಪನ ಮನೆಗೆ ಬಂದಾಯ್ತು. ಅಮ್ಮ ನಿಗೆ ಸಂಭ್ರಮ. ಮಕ್ಕಳು ಬಂದದ್ದು ಒಂದೆಡೆಯಾದರೆ ತವರಿನಿಂದ ಬಂದ ಸೀಗೆಕಾಯಿ ಪುಡಿ, ಹಲಸಿನ ಕುಜ್ಜಿ, ಕರಿಬಾಳೆ ಕೊನೆ, ಕಲಮಕ್ಕಿ ಮಾವಿನ ಮಿಡಿ ಉಪ್ಪಿನ ಕಾಯಿ, ಹಸುವಿನ ತುಪ್ಪ, ಎಮ್ಮೆಯ ತುಪ್ಪ, ಮನೆಯಲಿ‌ ಮಾಡಿದ ಅವಲಕ್ಕಿ,, ಕಂಚಿಕಾಯಿ, ನಿಂಬೆ ಹಣ್ಣು, ತೆಂಗಿನ ಹಿಡಿ ( ಪೊರಕೆ), ಒಂದೇ ಎರಡೆ.ಜೊತೆಯಲಿ ಅಮ್ಮನ( ಸುಶೀಲಮ್ಮ) ತಮ್ಮ ,ತಂಗಿಯ ಪ್ರೀತಿಯ ಸಂದೇಶಗಳ ಹೊತ್ತು ತಂದ ಮರಿಯಾಚಾರಿಯ ಜೊತೆ ಮಾತುಕತೆ ಯಾಡುತ್ತ ಸಮಯ ಮದ್ಯಾಹ್ನ  ೧  ಗೊತ್ತೇ ಆಗಿಲ್ಲ.
ಸ್ನಾನವಾಗಿಲ್ಲ, ತೋಟದಿಂದ ಇವರು ( ಯಜಮಾನರು) ಬರೋ ಸಮಯ, ಮರಿಯಾಚಾರಿಗೆ ಕುಡಿಯಲು ಪಾನಕ ಕೊಟ್ಟು ,ಅಲ್ಲೇ ಮುಚೆಕಡೆಯಲ್ಲಿ ಮಲಗಲು‌ ಹೇಳಿ ಸ್ನಾನಕ್ಕೆ ಹೊರಡುತ್ತಾಳೆ.
ತವರಿನಿಂದ ತಂದ ಗದ್ದೆ ಸವತೆಯ ಅಂಡು ಸುಟ್ಟ ಹುಳಿ ಜೊತೆಗೆ ನಿಂಬೆ ಹಣ್ಣಿನ ಗೊಜ್ಜು ,ಮಜ್ಜಿಗೆಯನ್ನದ ಜೊತೆ ಕಲಮಕ್ಕಿಯ ಪರಿಮಳದ ಉಪ್ಪಿನಕಾಯಿಯ  ಉಂಡ ಮರಿಯಾಚಾರಿ ಸಣ್ಣದೊಂದು ನಿದ್ದಗೆ ಜಾರುತ್ತಾನೆ.ಅದೇ ವೇಳೆಯಲ್ಲಿ ತವರಿಗೆ ಕಳಿಸಲೆಂದು ,ತಮ್ಮ ,ತಂಗಿಗೆಂದು ಅಡಿಗೆ ಮನೆಯಲ್ಲಿ ಕಾಯಿಪಾಕ ತಯಾರಾಗಿದೆ. ಕೆರೆಇಂದ ಕೆಸುವಿನ ದಡಿ ಬಂದಿದೆ. ಶೇಷಯ್ಯನ ಮನೆಯಿಂದ ಕೆಸುವಿನ ಗೆಡ್ಡೆ, ಗಂಪಣ್ಣನ ಮನೆಯಿಂದ ಚಂದ್ರಬಕ್ಕೆ ಹಲಸಿನಕಾಯಿ ತವರಿಗೆ ಹೋಗಲು ತಯಾರಾಗಿದೆ. ಹಲಸಿನ ಹಪ್ಪಳದ ಜೊತೆ ಕಾಫಿಯ ಚಪ್ಪರಿಸಿದ ಮರಿಯಾಚಾರಿ ಅಮ್ಮಯ್ಯಮ್ಮ ಕೊಟ್ಟ ೧೦೦ ರೂಪಾಯಿ  ಜೇಬಿಗಿರಿಸಿ ಅಯ್ಯನ ಜೊತೆ ಮಾತನಾಡುತ್ತ ಹೊಗೆಸೊಪ್ಪಿನ ಕವಳ ಬಾಯಿಗಿರಿಸಿ ಹೊರಡಲನುವಾಗುತ್ತಾನೆ.ಜೊತೆಯಲಿ ಬಂದ ಶಿವಣ್ಣಯ್ಯ,ಜಗ್ಗಯ್ಯ ಎಲ್ಲೋ ಆಡಲು ಹೋಗಿದ್ದಾರೆ, ಅಮ್ಮಯ್ಯ ಕಣ್ಣೀರಿನೊಂದಿಗೆ ಮಾಯ್ಲನ ಬಿಡಾರದೊರೆಗೆ ಮರಿಯಾಚಾರಿಯ ಬೀಳ್ಕೊಟ್ಟು ಮನೆಗೆ ಬಂದು ಯಜಮಾನರು ಊಟ ಮಾಡಿದ ತಟ್ಟೆಯಲ್ಲಿ ಊಟ ಬಡಿಸಿಕೊಂಡು ಊಟಕ್ಕೆ ಕೂರುತ್ತಾಳೆ......
ದೀಪಾವಳಿ ಹಬ್ಬ ಮುಗಿದಿದೆ, ಅಂಗಳದಲಿ ಹಿಂದಿನ ದಿನ ಹೊಡೆದ ಪಟಾಕಿಗಳಲಿ ಹಚ್ಚದೇ ಉಳಿದಿರುವ ಪಟಾಕಿ ಹುಡುಕುತ್ತ ,ರಜೆ ಮುಗಿಯುತ್ತ ಬಂತಲ್ಲಾ ಎಂಬ ದುಃಖದೊಂದಿಗೆ ಹಿಂದಿನ ನಾಲ್ಕು‌ದಿನದ ಮೆಲುಕು‌ ಹಾಕುತ್ತಿದ್ದೆ.
ಅಪ್ಪ ಶಿವಮೊಗ್ಗಕ್ಕೆ ಹೋಗಿದ್ದರು. ಪಟಾಕಿ ತರಬಹುದೆಂದುನಂಬಿಕೆ ಇತ್ತು. ನಾವು ಅಪ್ಪನ ಹತ್ತಿರ ಮಾತನಾಡುತ್ತಿದ್ದದ್ದೇ ಕಡಿಮೆ. ಅಪ್ಪನನ್ನು ಅಣ್ಣ ಎಂದು ಅಮ್ಮನನ್ನು ಅಕ್ಕ ಎಂದು ಕರೆಯುವುದು .ಅಣ್ಣ ಸಂಜೆ ಮನೆಗೆ ಬಂದು ಕೊಟ್ಟ ಪ್ಯಾಕೆಟ್ ಬಿಚ್ಚಿದ್ದು ಮುದ್ದಿನ ಮಗಳು. ಅಪ್ಪನ ಎಲ್ಲ ಕೆಲಸಕ್ಕೂ ಅವಳದೇ ರಾಯಬಾರ. ತಂದ ೫೦ ರೂ ಪಟಾಕಿಯಲ್ಲಿ ೪ ಪಾಲು. ಅದರಲ್ಲೇ ತುಳಸಿ ಹಬ್ಬಕ್ಕೆಂದು ಇನ್ನೊಂದು ಪಾಲು. ಸಿಕ್ಕದ್ದು ಸೀರುಂಡೆ ಎಂದು ಅದನ್ನೆ ೨ ದಿನ‌ ಚಪ್ಪರದಲಿ ಒಣಿಸುವ ಪರಿ.   ನಿತ್ಯ ಹಲವು ಬಾರಿ ಎಣಸುವುದು, ಆ ಸಂತೋಷ ಈಗ ಕನಸಲ್ಲೂ ಊಹಿಸಲು ಸಾದ್ಯವಿಲ್ಲ.ಕಡೆಯದಿನ ಮಾವ ,ಚಿಕ್ಕಮ್ಮ‌ಕೊಟ್ಟ ದುಡ್ಡಿನಿಂದ  ಗುಂಡಕಲ್ಲು ಮರಿಯಪ್ಪ ಗೌಡರ ಅಂಗಡಿ ಇಂದ ಸ್ವಲ್ಪ ಪಟಾಕಿ ಸೇರ್ಪಡೆ. ಬಲಿಪಾಡ್ಯಮಿ ದಿನ ಬೆಳಗಿನಿಂದಲೇ ಮನೆಯ ಎಲ್ಲಾ ದನ ಕರುಗಳ ಸ್ನಾನ. ಅವುಗಳಿಗೆ ಮೈ ಉಜ್ಜಿದಷ್ಟು ನನ್ನ ಮೈ ಉಜ್ಜಿ ಕೊಂಡಿದ್ದರೆ ನಾನು ಕೂಡ  ರೇವತಿ ,ಶ್ರೀಮತಿ (ಮಾವನಮಕ್ಕಳು,- ಹೆಸರು ಬದಲಿಸಿದೆ) ಯಂತೆ ಬೆಳ್ಳಗೆ ಇರುತ್ತಿದ್ದೆ. ದನಕರುಗಳಿಗೆ ಬಣ್ಣಬಣ್ದ ಹೂವಿನ ಹಾರ, ಪೂಜೆಯ ಜೊತೆ ಜೊತೆಯಲ್ಲಿ ತಿನ್ನಲು ಅವಕ್ಕೆ ಹುಗ್ಗಿ, ನಮ್ಮ ಅಪ್ಪನ ಪೂಜೆ,ಮಂಗಳಾರತಿ,ಮಂತ್ರಪುಷ್ಪ,. ದನ��ಳು ಸಗಣಿ ಹಾಕಿದರೂ ಅಪ್ಪ ಬಿಡುವ ಕಣ್ಣಿಗೆ ಹೆದರಿ ನಾವೇ ಸಗಣಿ ಹಾಕಿಕೊಂಡವೇನೋ ಎಂದು ಚಡ್ಡಿ ಮುಟ್ಟಿ ನೋಡಿ ಕೊಳ್ಳುತ್ತಿದ್ದೆವು. ಪೂಜೆಯೂ ಮುಗಿದಿದೆ, ಸಂಜೆ ಯಾವಾಗ ಬರುವುದೆಂಬ ತವಕದಲಿ ಏನು ಊಟಮಾಡಿದವೆಂದೂ ನೆನಪಿಲ್ಲ. ಹಿಂದಿನ ದಿನ ತೋಟದಿಂದ ತಂದ ನಾನ ತರದ ಸೊಪ್ಪಿನಿಂದ ಏನೋ ಪಲ್ಯ ಮಾಡಿದ್ದರು. ಕಹಿ ಕಹಿ ಯಾಗಿತ್ತು. ಗಣಕೆ ಸೊಪ್ಪು ಅದಕ್ಕೆ ಹಾಕುತ್ತೇವೆಂದು‌ ಅಮ್ಮ ಗಣಿಕೆ ಹಣ್ಣ ಒಂದು ಮುಷ್ಟಿ ಕೊಟ್ಟು ಹೇಳಿದ್ದ ನೆನಪು. ಅದರ ಜೊತೆಗೆ ಒಂದು ಸವತೆ ಬೀಳನ್ನು ತಂದು ಹಂಡೆಗೆ ಕಟ್ಟಿದ್ದಳು. ಅದರಲ್ಲಿದ್ದ ಸವತೆ ಕಾಯಿ‌ ತಿಂದು ವಾಂತಿ ಮಾಡಿದ್ದೆ.ಆಮೇಲೆ ತಿಳಿಯಿತು ಅದು  ಹಿಂಡಲ ಕಾಯಿ ( ಡೂಪ್ಲಿಕೇಟ್ ಸವತೆ) ಅಂತ. ಆಗ ಮಾಡುತ್ತಿದ್ದ ಎಣ್ಣೆ ಸ್ನಾನ  ಆಗ ನಮಗೆ ಕಿರಿಕಿರಿ ಅನಿಸುತ್ತಿತ್ತು. ಆದರೆ ಈಗ ನೆನಪಿಸಿಕೊಂಡರೆ ಅದುವೇ ಸ್ವರ್ಗ. ಮೈಗೆಲ್ಲಾ ಹರಳೆಣ್ಣೆ ಹಚ್ಚುತ್ತಿದ್ರು. ಒಂದೆರಡು ಗಂಟೆ ಹಾಗೆ ಇರಬೇಕು. ನಂತರ ಒಬ್ಬೊಬ್ಬರಂತೆ ಸ್ನಾನ.( ಮಾವನ ಮನೆಯಲ್ಲಾದರೋ ಕಡಾಯ ಸ್ನಾನ , ಅದನ್ನ ಮುಂದೆ ಸಮಯ ಬಂದಾಗ ನಿಮಗೆ ಹೇಳುವೆ) .ಮೊದಲು ಬಿಸಿನೀರು ಹೋಣಾಗಿದ ಅಂತ ಟೆಸ್ಟ ಮಾಡ್ತಾರೆ. ಆಮೇಲೆ ನೀರು ತುಂಬಿಸಿ ತುಂಬಿಸಿ ಬಿಡುವ ಪರಿ ಸಿರಿಮನೆ ಪಾಲ್ಸಿನ ರಭಸದಂತೆ ಇರುತ್ತದೆ. ಬೆಂಕಿ ಸರಿಯಲು ಅಪ್ಪ, ನೀರು ಹಾಕಲು ಅಕ್ಕ, ಈಗ ತಲೆಗೆ ಗುಳ ಹಾಕಲು‌ ಅಮ್ಮ. ಬೆಳ್ಳಟ್ಟೆ ಸೊಪ್ಪು ಅಥವಾ ತವರುಮನೆಯಿಂದ ಬಂದ ಗುಳದ ತೊಪ್ಪೆ ಇಂದ ತೆಗೆದ ಗುಳ ,ಈಗಿನ‌ಕಾಲದ ಶ್ಯಾಂಪು ,ಸೀಗೆ ಪುಡಿಯ ಜೊತೆ ಹರಳೆಣ್ಣೆ ಹೋಗು ವರೆಗೂ ಉಜ್ಜುತ್ತಾರೆ. ಈಗ ಯಾವ ದೇಶದಲ್ಲೂ ,ಅಮೇರಿಕದಲ್ಲೂ ಅಂತಹ ಮಾಲೀಶ್ ಸಿಗೊದಿಲ್ಲ. ನಂತರ ಸೀಗೆ ಪುಡಿಯಲ್ಲಿ ಬೆನ್ನು ಉಜ್ಜೋದು ,ಆಹಾ ತುರಿಕೆ ಯಾಗುತ್ತಿರುವ ಬೆನ್ನಿಗೆ ತರಿತರಿಯಾದ ಸೀಗೆ ಪುಡಿ. ಯೋಚಿಸಿದರೆ ಮತ್ತೊಮ್ಮೆ ಆ ಬಾಲ್ಯಕ್ಕೆ ಹೋಗಬೇಕೆನಿಸುತ್ತಿದೆ. ಎಲ್ಲ ಮುಗಿದ ಮೇಲೆ ಸೋಪಿನಲ್ಲೊಮ್ಮೆ ಉಜ್ಜಿ, ಒಂದು ಬಕೆಟ್ಟ ನೀರು ಹೋಣು ಮಾಡಿ ನಮಗೆ ಕೊಟ್ಟು, ನಮ್ಮ ಪ್ರೈವೆಟ್ ಜಾಗ ಉಜ್ಜಿಕೊಳ್ಳಲು ಹೇಳಿ ಹೋಗುತ್ತಾರೆ. ಆ ಹತ್ತು ನಿಮಿಷ  ನಮ್ಮ ನೀರಾಟದ ಸಮಯ. ನಂತರ ಬರುವ ಅಮ್ಮ‌ ಇನ್ನಷ್ಟು ನೀರ್ಹಾಕಿ, ಕಾಶಿ ಭಾಗಿರಥಿ ಮಂತ್ರ ಪಠಿಸಿ,ನೀರು ಸುಳಿದು , ತಲೆ ಒರೆಸಿ ಹೋದ ಮೇಲಷ್ಟೆ ಅಭ್ಯಂಜನ ಮುಗಿದಂತೆ. ಇಷ್ಟು ಓದಿದ್ದು ಸಾಕು, ಈದಿನ ಅಮವಾಸ್ಯೆ,,ಗ್ರಹಣ, ಎಲ್ಲರೂ ಸ್ನಾನ ಮಾಡಲು ಹೊರಡಿ. ಮುಂದೆ ದೀಪದ ಕೋಲು ಕಟ್ಟೋದು ,ತೋಟ ಗದ್ದೆಗಳಲ್ಲಿ ಕೋಲು ಹಚ್ಚೋದು ಎಲ್ಲ ವಿಚಾರ ನಾಳೆ ಮಾತನಾಡೋಣ.
ಉರಿಯಿತಿರೆ ದಬ್ಬೆಯ ದೊಂದಿ ಊರೆಲ್ಲ ಸುತ್ತುತಿರೆ ದೀಪದ ಜೊತೆ ಮಂದಿ ಹಾರಾಟ ,ಕೂಗಾಟ ಪಟಾಕಿಗಳ ಸಿಡಿದಾಟ ಗದ್ದೆಯ ಬಯಲಲಿ ದೀಪಗಳ ಸುದರ ನೋಟ,
ಸಾಲೆಗದ್ದೆ ತೋಟಕೊಂದು, ಗೋಪಾಲ ಕೃಷ್ಣಗೊಂದು ಚೌಡೇಶ್ವರಿಯ ಮುಂದೊಂದು,ಶ್ರೀ ರಾಮನಿಗೆ ಮತ್ತೊಂದು, ಬ್ರಹ್ಮನಿಗೆ ಸಲಬೇಕೆಂದು,ಈಶ್ವರಗೆ ಕೋಪಬರಬಾರದೆಂದು, ೨೨ ರಲಿ ಇನ್ನೊಂದು ತುಳಸಿ ಕಟ್ಟೆಗೆಂದು......
ಹೀಗೆ ದೀಪದ ಕೋಲು ಮುಗಿಸಿದ ಸಂಭ್ರಮ ಹಬ್ಬ ಮುಗಿಯಿತಲ್ಲ ಎಂಬ ಬೇಜಾರು ಇನ್ನೊಂದು ಕಡೆ ಮನೆಗೆ ಬಂದು ಪಟಾಕಿಗಳ ಲೆಕ್ಕ ಪೂರೈಸಿ ತುಳಸಿಪೂಜೆಗೆ ಸ್ವಲ್ಪ  ತೆಗೆದಿರಿಸಿ, ಊಟದ ಕಾರ್ಯ ಪೂರೈಸಿ ಮಲಗುವಾಗ ರಾತ್ರಿ ಹನ್ನೊಂದು ಗಂಟೆ.
ಮರುದಿನ ಬೆಳಿಗ್ಗೆ ಹಚ್ಚದೇ ಊಳಿದ ಪಟಾಕಿಗಳ ಆರಿಸಿ ಇನ್ನೊಮ್ಮೆ ಹೊಡೆದು, ಕಸಗಳಿಗೆಲ್ಲ ಬೆಂಕಿ ಇಟ್ಟು ,ತಿಂಡಿ ಅಥವಾ ಗಂಜಿ ಊಟ ಮುಗಿಸಿ ಅಡಕೆ ಸುಲಿತಕ್ಕೆ ಕೂರುವ ಸಂಭ್ರಮ. ದೀಪಾವಳಿಯೆಂದು ಎರಡು ದಿನ ಅಡಕೆ ಸುಲಿತ ನಿಂತಿತ್ತು. ಅರ್ದ ಹಂಡೆ ಅಡಕೆ ಸುಲಿಯಲೇ ಬೇಕಿತ್ತು.
ಲಕ್ಷ್ಮಿ ಪಠಾಕಿಯ ಸದ್ದಿಗೆ ಜೋರಾಗಿ ಹೆದರಿ ಕಣ್ಣು ಬಿಟ್ಟೆ. ಅಯ್ಯೋ ಇದುವರೆಗೆ ಕಂಡಿದ್ದು ಕನಸೆಂದು ಅರಿವಾಗಲು ಕೆಲ ಸಮಯ ಬೇಕಾಯಿತು.
0 notes
karavalivani · 2 years
Photo
Tumblr media
💥💥💥💥💥💥💥💥💥💥*ಕುಂದಾಪುರ: ದನ, ಬ್ಯಾರಿಕೇಡ್ ಗಳಿಂದ ಗೊಂದಲವಾಗಿ ಬ್ರೇಕ್ ಹೊಡೆದ ಆಂಬ್ಯುಲೆನ್ಸ್ ಚಾಲಕ-ನಾಲ್ವರು ದಾರುಣ ಸಾವು-karavalivani* 👇🏻👇🏻👇🏻👇🏻👇🏻👇🏻 https://www.karavalivani.com/2022/07/karavalivani_20.html (at Udupi) https://www.instagram.com/p/CgQjczrpHt4/?igshid=NGJjMDIxMWI=
0 notes
nammurutv · 2 years
Text
ಉತ್ಪಾದಕರ ಸಂಘಗಳಿಗೆ ಸ್ವಂತ ಕಟ್ಟಡ..
ಉತ್ಪಾದಕರ ಸಂಘಗಳಿಗೆ ಸ್ವಂತ ಕಟ್ಟಡ..
ದೊಡ್ಡಬಳ್ಳಾಪುರ:ಪ್ರತೀಗ್ರಾಮ ಮಟ್ಟ ದಲ್ಲೂ ಹಾಲು ಉತ್ಪಾದಕ ಸಂಘಗಳಿಗೆ ಸ್ವಂತ ಕಟ್ಟಡ ಹೊಂದುವಂತೆ  ಒಕ್ಕೂಟ ದಿಂದ ದನ ಸಹಾಯ ನೀಡಲಾಗುತ್ತಿದೆ. ಹಾಲು ಉತ್ಪಾದಕ ರೈತರು ತಮ್ಮ ದೈನಂದಿನ ಕೆಲಸ ಕಾರ್ಯ ಗಳಲ್ಲಿ ನಿರತರಾಗಿ ಜಮೀನಿನಲ್ಲಿ ಹಾವು ಕಡಿತಕ್ಕೊಳಗಾಗಿ ಮರಣ ಹೊಂದಿದರೆ ಎರಡು ಲಕ್ಷ ರೂಗಳ ಪರಿಹಾರ ದನ ನೀಡಲಾಗುತ್ತಿದೆ ಎಂದು ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ತಿಳಿಸಿದರು. ನಗರದ ಬಮೂಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಂಪಿಸಿಎಸ್ ನಲ್ಲಿ ಹಾಲು ಉತ್ಪಾದಕರ ರೈತರು 69 ವರ್ಷ ಮೇಲ್ಪಟ್ಟವರು…
View On WordPress
0 notes
vnews24kannada · 4 years
Text
ಸಹಪಾಠಿಗಳ ನಿಂದನೆ ಸಹಿಸದೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ
ಹಾಸನ: ಸಹಪಾಠಿಗಳ ನಿಂದನೆ ಸಹಿಸದೆ ಮನನೊಂದು ತಾಲ್ಲೂಕಿನ ಹರುವನಹಳ್ಳಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಹರ್ಷಿತ್ ಗೌಡ (16) ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಹೊರವಲಯದ ಕಂಚಮಾರನಹಳ್ಳಿ ಸಮೀಪದ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಹರ್ಷಿತ್‌ಊರಿಗೆ ತೆರಳಿದ್ದ. ದನ ಮೇಯಿಸಲು ಹೋಗುವುದಾಗಿ ಹೇಳಿ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ವರ್ಷದ ಹಿಂದೆ ನಡೆದಿದ್ದ ಅಪಘಾತದಲ್ಲಿ ಈತನ ಮೂಗಿಗೆ ಪೆಟ್ಟು ಬಿದ್ದಿತ್ತು. ಸ್ನೇಹಿತರೆಲ್ಲ ಮೂಗು ಹರುಕ ಎಂದುರೇಗಿಸುತ್ತಿದ್ದರು.…
Tumblr media
View On WordPress
0 notes
vgowda · 4 years
Text
ಸಬಾಟಿನಾ ಬರೆದಳು!
ಹದಿನೈದು ವರ್ಷದ ಆ ಹುಡುಗಿಗೆ, ತನ್ನ ಜೊತೆ ಓದುತ್ತಿರೋ ಇತರ ಹುಡುಗಿಯರ ಹಾಗೇ ಲಿಪ್ಸ್ಟಿಕ್ ಹಚ್ಚಿಕೊಳ್ಳಬೇಕು ಅನ್ನಿಸಿತು. ಅವರ ಹಾಗೆಯೇ ಜೀನ್ಸ್ ತೊಡಬೇಕು ಅನ್ನಿಸಿತು. ಅಷ್ಟೆ; ಅವಳ ಅಪ್ಪ, ಅಮ್ಮ ಕೆಂಡಾಮಂಡಲವಾಗಿಬಿಟ್ಟಿದ್ದರು.
ಹದಿಹರೆಯದ ಹುಡುಗನನ್ನು ಚುಂಬಿಸಿದ ಬಗ್ಗೆ ಆಕೆ ಡೈರಿಯಲ್ಲಿ ಬರೆದುಕೊಂಡಿದ್ದಳು. ಅದನ್ನೋದಿದ ಅವಳ ತಾಯಿ, ಅವಳನ್ನು ಒದೆದಳು, ಕೆನ್ನೆಗೆ ಬಾರಿಸಿದಳು. ಸೂಳೆ ಎಂದು ಬೆಂಕಿ ಕಾರಿದಳು.
ಅವಳೊಮ್ಮೆ ಬಿಗಿಯಾದ ಟೀ-ಶರ್ಟ್ ಧರಿಸಿದ್ದಕ್ಕೆ ಅವಳ ತಾಯಿ ಚಪ್ಪಲಿಯಿಂದ ಮಗಳ ಮುಖದ ಮೇಲೆ ಹೊಡೆದಳು – ತುಟಿ ಸೀಳಿ ಹೋಗುವ ಹಾಗೆ.
Tumblr media
ಹೆತ್ತವರಿಂದಲೇ ಅಂಥ ರಾಕ್ಷಸ ಹಿಂಸೆಯನ್ನು ಅನುಭವಿಸಿದ ಆ ಹುಡುಗಿ ಸಬಾಟಿನಾ. ಮುಸ್ಲಿಂ ಕುಟುಂಬದ ಹುಡುಗಿ, ತನ್ನ ಕುಟುಂಬದ ಕತ್ತಲ ಕೋಣೆಯಿಂದ ಆಸ್ಟ್ರಿಯಾದ ಪಾಶ್ಚಾತ್ಯ ಸಂಸ್ಕೃತಿಯ ಬೆಳಕಿನ ಎಳೆಗಳಿಗೆ ಒಡ್ಡಿಕೊಳ್ಳಬಯಸಿದ್ದಳು. ಅವಳ ಕುಟುಂಬದ ಲೆಕ್ಕದಲ್ಲಿ, ಅವಳು ಮಹಾಪರಾಧ ಮಾಡಹೊರಟಿದ್ದಳು.
ಕಾಶ್ಮೀರ ಸಮೀಪದ ಹಳ್ಳಿಯೊಂದರಲ್ಲಿ ಬೆಳೆದ ಅವಳು, ಆಸ್ಟ್ರಿಯಾಕ್ಕೆ ಹೋದದ್ದು ಹನ್ನೊಂದು ವರ್ಷದವಳಿದ್ದಾಗ. ಅವಳ ಕುಟುಂಬ ಪಾಕಿಸ್ತಾನದ ಲಾಹೋರಿನಿಂದ ಆಸ್ಟ್ರಿಯಾಕ್ಕೆ ವಲಸೆ ಹೋಗಿತ್ತು. ಅವಳ ಪಾಲಿಗೆ ಬದುಕು ನರಕವಾದದ್ದು ಕೂಡ ಅಲ್ಲಿಂದಲೇ. ಅಲ್ಲಿ ಅವಳು ಹೊಸ ಕನಸು ಹುಡುಕಿಕೊಳ್ಳತೊಡಗಿದ್ದರೆ, ಅವಳ ಕುಟುಂಬ ಮಾತ್ರ, ಅವಳನ್ನು ಸೆರಗಿನ ಕೆಂಡವೆಂಬಂತೆ ನೋಡಿತ್ತು.
ಸಾಂಪ್ರದಾಯಿಕ ಉಡುಪನ್ನು ಮಗಳು ಧಿಕ್ಕರಿಸತೊಡಗಿದ್ದು ಅವಳ ತಂದೆತಾಯಿಗೆ ಒಪ್ಪಿಗೆಯಾಗಲಿಲ್ಲ. ಸಂಬಂಧಿಯೊಬ್ಬನೊಂದಿಗೆ ಅವಳ ಮದುವೆ ಮಾಡಬೇಕೆಂದು ಅವರಾಗಲೇ ನಿರ್ಧರಿಸಿದ್ದರು. ಅದನ್ನೂ ಆಕೆ ನಿರಾಕರಿಸಿದಳು. ಅವಳು ಹೋಗುತ್ತಿರುವ ಶಾಲೆಯಲ್ಲಿ ವೇಶ್ಯಾವೃತ್ತಿ ಹೇಳಿಕೊಡಲಾಗುತ್ತಿದೆಯಾ ಅಂತಲೂ ಯೋಚಿಸುವ ಮಟ್ಟಕ್ಕೆ ಅವಳಪ್ಪ ಇಳಿದ. ಮಗಳ ಕನ್ಯತ್ವವನ್ನೇ ಪರೀಕ್ಷೆ ಮಾಡಿ ನೋಡುವ ಮಟ್ಟಕ್ಕೆ ಅವಳ ತಾಯಿ ಹೋದಳು.
ಹದಿಹರೆಯದವಳ ಮನಸ್ಸು ಒಡೆದುಹೋಗಿತ್ತು.
ಆಸ್ಟ್ರಿಯಾದಿಂದ ಪಾಕಿಸ್ತಾನಕ್ಕೊಮ್ಮೆ ಹೋದಾಗಲಂತೂ ಅವಳು ಭಯಂಕರ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳೋ ಹಾಗಾಯಿತು. ಅಲ್ಲಿ ಬಿಗಿಯುಡುಪಿನಲ್ಲಿದ್ದ ಮಗಳು ಪುರುಷರ ಕಣ್ಣಿನ ಕೇಂದ್ರಬಿಂದುವಾದದ್ದಕ್ಕೆ ಸಂಬಂಧಿಗಳ ಎದುರೇ ಅವಳ ತಾಯಿ ದನ ಬಡಿಯುವ ಹಾಗೆ ಅವಳನ್ನು ಬಡಿದುಬಿಟ್ಟಳು. ಆಸ್ಟ್ರಿಯಾ ಶಾಲೆಯ ಸಹವಾಸ ಸಾಕೆಂದು, ಮಗಳನ್ನು ಮದರಸಾಕ್ಕೆ ಕಳಿಸುವ ನಿರ್ಧಾರವೂ ಆಗಿಹೋಯಿತು. ಆಕೆಗೆ ಆಗ ಹದಿನಾರು. ಮದರಸಾದಲ್ಲಿ ಅವಳು ಸುಮಾರು ಮೂವತ್ತು ಹುಡುಗಿಯರಿರುವ ಕೋಣೆಯ ಪಾಲಾಗಿಬಿಟ್ಟಳು. ದಿನವಿಡೀ ಕುರಾನ್ ಅಧ್ಯಯನ, ಪ್ರಾರ್ಥನೆ ಮತ್ತು ಪ್ರವಚನ ಆಲಿಸುವುದು. ಸಾಕುಸಾಕಾಗಿಹೋಯಿತು. ಎಷ್ಟು ರೋಸಿಹೋಗಿದ್ದಳೆಂದರೆ, ಊಟವನ್ನೇ ತಿರಸ್ಕರಿಸಿ ಕುಳಿತುಬಿಟ್ಟಳು. ಮದರಸಾ ಅವಳನ್ನು ಹೊರಹಾಕಿತು. ಮೂರು ತಿಂಗಳ ನರಕ ಅಲ್ಲಿಗೆ ಮುಗಿದಿತ್ತು. ಆಸ್ಟ್ರಿಯಾಕ್ಕೆ ಮರಳಬೇಕು ಅನ್ನೋ ಆಸೆ ಹೆಚ್ಚಾದಾಗ, ತಂದೆ ತಾಯಿ ತೋರಿಸಿದ ಹುಡುಗನ ಜೊತೆ ಮದುವೆಗೆ ಒಪ್ಪಿಗೆ ಹೇಳಿದಳು. ಕಡೆಗೂ ಆಸ್ಟ್ರಿಯಾಕ್ಕೆ ಹಿಂತಿರುಗೋಕ್ಕೆ ಅವಕಾಶ ಸಿಕ್ಕಿತು. ಆದರೆ ಅದಕ್ಕಾಗಿ ಅವಳು ಆ ಹುಡುಗನ ಜೊತೆ ನಿಶ್ಚಿತಾರ್ಥದ ದಿನದವರೆಗೂ ಕಾಯಬೇಕಾಯಿತು.
ಮರಳಿ ಮನೆಗೆ ಬಂದವಳಿಗೆ, ಆ ಹುಡುಗನ ಜೊತೆ ಮದುವೆಯಾಗೋ ಮನಸ್ಸಂತೂ ಇರಲಿಲ್ಲ. ತನ್ನ ಆಲೋಚನೆ ಬಗ್ಗೆ ತಂದೆ ತಾಯಿಗೆ ಸುಳಿವು ಸಿಕ್ಕಿಬಿಟ್ಟಿತು. ಮಗಳು ತಮ್ಮ ಮಾತಿಗೆ ಮಣಿಯುವುದಿಲ್ಲ ಅನ್ನೋದು ಹೆಚ್ಚು ಸ್ಪಷ್ಟವಾಗುತ್ತಿದ್ದಂತೆ ಅವರು, ಅವಳನ್ನು ಕೊಂದುಬಿಡುವ ಮಾತಾಡಿದರು. ಮನೆಯ ಮರ್ಯಾದೆಗಿಂತ ನಿನ್ನ ಪ್ರಾಣ ದೊಡ್ಡದಲ್ಲ, ಹುಷಾರ್ ಎಂದು ಸಿಡಿದುಬಿಟ್ಟರು. ಅವರ ಕ್ರೌರ್ಯದಿಂದ ತಪ್ಪಿಸಿಕೊಳ್ಳಲೇಬೇಕಿತ್ತು. ಮನೆ ಬಿಟ್ಟು ಓಡಿದಳು. ಎಲ್ಲೋ ಒಂದು ಕೆಲಸಕ್ಕೆ ಸೇರಿಕೊಂಡಳು. ಅಲ್ಲಿಗೂ ಕುಟುಂಬದ ಕಿರಿಕಿರಿ ಅಟ್ಟಿಸಿಕೊಂಡು ಬಂತು. ಆ ಕಾರಣಕ್ಕಾಗಿಯೇ ಕೆಲಸವೂ ಹೋಯಿತು. ಅಲ್ಲಿಂದಲೂ ಓಡಿಹೋಗಬೇಕಾದ ಅನಿವಾರ್ಯತೆ ಬಂತು. ಗೆಳೆಯರ ನೆರವು ಪಡೆದು ವಿಯೆನ್ನಾಕ್ಕೆ ಹೋದಳು.
ವಿಯೆನ್ನಾ ಅವಳಿಗೆ ಹೊಸ ಬದುಕು ಕೊಟ್ಟಿತು. ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿದಳು. ಆಕೆ ಸಬಾಟಿನಾ ಜೇಮ್ಸ್ ಆದದ್ದು ಆಗ.
Tumblr media
ಇವತ್ತು ಸಬಾಟಿನಾ ಜರ್ಮನಿಯಲ್ಲೊಂದು ಸಂಸ್ಥೆ ನಡೆಸುತ್ತಿದ್ದಾಳೆ. ತಾನು ಎದುರಿಸಿದಂಥದೇ ಪರಿಸ್ಥಿತಿಯ ಕಾರಣದಿಂದಾಗಿ ಮನೆಬಿಟ್ಟು ಓಡಿಬಂದ ಹೆಣ್ಣುಮಕ್ಕಳಿಗೆ ನೆಲೆ ಮತ್ತು ನೆರಳು ಕಲ್ಪಿಸುವ ಸಂಸ್ಥೆ ಅದು. ಮರ್ಯಾದಾ ಹತ್ಯೆಯ ಕರಾಳತೆಯಿಂದ ತಪ್ಪಿಸಿಕೊಂಡಳಲ್ಲ ಅನ್ನೋ ಕಾರಣಕ್ಕೆ ಸಬಾಟಿನಾ ಜೇಮ್ಸ್ ಕಥೆ ಒಂದು ನಿರಾಳತೆಯನ್ನು ನಮ್ಮ ಮನಸ್ಸಲ್ಲಿ ಉಳಿಸುತ್ತದೆ. ಆದರೆ ಅದಕ್ಕಾಗಿ ಅವಳು ಹಾದುಬಂದ ಕಡುಭಯಂಕರ ದಾರಿ ತಲ್ಲಣ ಹುಟ್ಟಿಸುತ್ತದೆ.
ತನ್ನ ಕಥೆಯನ್ನು ‘ಸಬಾಟಿನಾ – ಫ್ರಮ್ ಇಸ್ಲಾಂ ಟು ಕ್ರಿಶ್ಚಿಯಾನಿಟಿ – ಎ ಡೆತ್ ಸೆಂಟೆನ್ಸ್’ ಎಂದು ಆಕೆ ಬರೆದುಕೊಂಡಿದ್ದಾಳೆ. ಮನೆಬಿಟ್ಟ ಬಳಿಕ ವಿಯೆನ್ನಾಕ್ಕೆ ಬಂದವಳನ್ನು ಫೊಟೋಗ್ರಾಫರನೊಬ್ಬ, ಮಾಡೆಲ್ ಲೋಕಕ್ಕೆ ಪರಿಚಯ ಮಾಡಿಕೊಡ್ತೀನಿ ಎಂದು ಹೇಳಿ, ಬೆತ್ತಲೆ ಪೋಸು ಕೊಡಲು ಅವಳನ್ನೊಪ್ಪಿಸಿ ವಂಚಿಸುತ್ತಾನೆ. ಅವಳ ಸಮ್ಮತಿಯೇ ಇಲ್ಲದೆ ಆಸ್ಟ್ರಿಯಾದ ಪತ್ರಿಕೆಯಲ್ಲಿ ಅವಳ ಆ ಚಿತ್ರಗಳು ಪ್ರಕಟವಾಗುತ್ತವೆ. ಅಸಹಾಯಕಳೊಬ್ಬಳನ್ನು ಹೆಜ್ಜೆಹೆಜ್ಜೆಗೂ ಜಗತ್ತು ಹೇಗೆ ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತದೆ ಎನ್ನೋದಕ್ಕೆ ಅದೊಂದು ಉದಾಹರಣೆ ಅಷ್ಟೆ. ಅವೆಲ್ಲ ವಂಚನೆ, ಸಂಚುಗಳನ್ನು ದಾಟಿ ಸಬಾಟಿನಾ ಇವತ್ತು ನಮ್ಮೆದುರು ದಿಟ್ಟೆಯಾಗಿ ನಿಂತಿದ್ದಾಳೆಂದರೆ, ಅದು ಅವಳ ಸ್ವಂತ ಬಲದಿಂದ ಮಾತ್ರ.
ಸಾವಿರ ಸಾವಿರ ಹುಡುಗಿಯರ ಪ್ರತಿನಿಧಿ ತಾನು ಎಂದು ಹೇಳಿಕೊಳ್ಳುವಾಗ, ಸಬಾಟಿನಾಗೆ ಗೊತ್ತಿದೆ: ಎಷ್ಟೊಂದು ಹುಡುಗಿಯರು ತಾನು ಕಂಡಂಥದೇ ಕ್ರೂರ ಪ್ರಪಂಚದಲ್ಲಿ ಚಡಪಡಿಸುತ್ತಿದ್ದಾರೆ; ತಪ್ಪಿಸಿಕೊಳ್ಳಲಾರದೆ ಸಾಯುತ್ತಿದ್ದಾರೆ ಅನ್ನುವುದು.
ಸಬಾಟಿನಾ, ಅವರೆಲ್ಲರ ಪಾಲಿನ ಸಂಕಲ್ಪ.
0 notes
Text
ಅಡಿವಿ ಶೇಷ್ ಅಭಿನಯದ 'ಹಿಟ್ 2' ಚಿತ್ರ ಇದೇ ದಿನ OTT ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ
ಅಡಿವಿ ಶೇಷ್ ಅಭಿನಯದ ‘ಹಿಟ್ 2’ ಚಿತ್ರ ಇದೇ ದಿನ OTT ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ
ಹಿಟ್ 2 OTT ಲಾಂಚ್: ದಕ್ಷಿಣ ಚಿತ್ರರಂಗದ ಸೆಲೆಬ್ರಿಟಿ ಅಡಿವಿ ಶೇಷ್ ಅವರ ‘ಹಿಟ್ 2’ ಚಿತ್ರ ಇತ್ತೀಚೆಗೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಚಿತ್ರದಲ್ಲಿ ಅಡಿವಿ ಶೇಶ್ ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣ ದೇವ್ ಅವರ ಕಾರ್ಯದಲ್ಲಿ ಕಾಣಿಸಿಕೊಂಡರು. ನಟನು ತನ್ನ ಕಾಣಿಸಿಕೊಳ್ಳುವುದರೊಂದಿಗೆ ವ್ಯಕ್ತಿಗಳ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾದನು. ಇದೇ ಸಮಯದಲ್ಲಿ, ಥಿಯೇಟರ್‌ಗಳನ್ನು ಅಲುಗಾಡಿಸಿದ ನಂತರ, ನಟನ ಈ ಚಿತ್ರವು…
Tumblr media
View On WordPress
0 notes
aakrutikannada · 1 year
Text
ಎಲ್ಲಿ ಹೋಯಿತು ನಮ್ಮ ವಡ್ಡ ಕಾಲ!? - ಪೀರಸಾಬ ನದಾಫ
ಅವ್ವ ಕಟ್ಟಿದ ರೊಟ್ಟಿ ಜೊತೆ ಬದನೇಕಾಯಿ ಎಣಗಾಯಿ ನುಚ್ಚಿನಂಬಲಿ ಕಲ್ಲಿನ್ಯಾಗ ಅರದ ಕಾರಾ, ಶೇಂಗಾಹಿಂಡಿ ನವಣಕ್ಕಿ ಅನ್ನಂ ಇದ್ದರೇ ಎಷ್ಟು ಚಂದ….ಕವಿ ಪೀರಸಾಬ ನದಾಫ ಅವರ ಲೇಖನಿಯಲ್ಲಿ ಮೂಡಿಬಂದ ಸುಂದರ ಕವನ ತಪ್ಪದೆ ಮುಂದೆ ಓದಿ ಮತ್ತು ಶೇರ್ ಮಾಡಿ… ದನ ಕಾಯಲು ಹೋದಾಗ ಗುಡ್ಡದ್ವಾರಿಯಲ್ಲಿ ನಿಂತ ನೀರಿನ‌ ಮೇಲಾಡುತ್ತಿದ್ದ ಹುಳಾ, ಕಸ – ಕಡ್ಡಿಗಳನ್ನು ಕೈಯಲ್ಲಿ ಸರಿಸುತ್ತ ಗಟಗಟನೇ ಬೊಗಸೆ ಎತ್ತಿ ಕುಡಿದು ಮತ್ತೆ ಡುರ್…ಅನ್ನತ್ತಿದ್ದೀವಿ ಗುಡ್ಡದ ತುತ್ತ ತುದಿ ಮರದ ಹರಿಕೊಂಬಿ ಮ್ಯಾಲ ಮಂಗ್ಯಾನ್ಹಾಂಗ್…
Tumblr media
View On WordPress
0 notes
shivksworld · 4 years
Photo
Tumblr media
ನಾವು ಪರಿಹಾರವನ್ನು ಹುಡುಕಿದಾಗ ನಾವು ಮೊದಲು ನಮ್ಮ ಸಮಸ್ಯೆಯನ್ನು ತಿಳಿದುಕೊಳ್ಳಬೇಕು. ಅನೇಕ ಜನರು ತಮ್ಮ ಸ್ವಂತ ನೆಲೆಯನ್ನು ಪರಿಹರಿಸಬಲ್ಲ ಸಾಮಾನ್ಯ ಸಮಸ್ಯೆಗೆ ಬರುತ್ತಾರೆ. ನಿಮ್ಮ ಸಮಸ್ಯೆಯನ್ನು ತಿಳಿದ ನಂತರ ನಿಮ್ಮ ಸಮಸ್ಯೆಗೆ ಸಂಬಂಧಿಸಿದಂತೆ ನಿಮಗೆ ಕೆಲವು ರೀತಿಯ ಸಹಾಯ ಬೇಕಾದರೆ ನೀವು ನಮ್ಮ ಬಳಿಗೆ ಬರಬಹುದು. ನೀವು ನಮ್ಮೊಂದಿಗೆ ಹಂಚಿಕೊಂಡಾಗ ನಾವು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇವೆ ಮತ್ತು ನಾವು ಅದರ ಮೇಲೆ ಕೆಲಸ ಮಾಡುತ್ತೇವೆ ಮತ್ತು ಇದನ್ನು ಪರಿಹರಿಸುತ್ತೇವೆ. ಕಳೆದುಹೋದ ಪ್ರೀತಿಯ ಕಾಗುಣಿತ, ಬ್ಲ್ಯಾಕ್ ಮ್ಯಾಜಿಕ್ ಕಾಗುಣಿತ, ಸೇಡು ಕಾಗುಣಿತ, ವಿಚ್ orce ೇದನ ಕಾಗುಣಿತ, ಪವರ್ ಕಾಗುಣಿತ, ಬ್ಲ್ಯಾಕ್ ಮ್ಯಾಜಿಕ್ ತೆಗೆಯುವ ಮ್ಯಾಜಿಕ್, ಸಂಮೋಹನ, ನಿಯಂತ್ರಣ ಪಾಲುದಾರ, ಗೆಳೆಯ ಗಂಡನನ್ನು ನಿಯಂತ್ರಿಸಿ, ದುಷ್ಟ ವ್ಯಕ್ತಿಗೆ ಹಾನಿ ಮಾಡುವ ಮೂಲಕ ಸೇಡು ತೀರಿಸಿಕೊಳ್ಳಿ, ಸತ್ತ ಕಾಗುಣಿತ, ವಾಟ್ಸಾಪ್ +918003556857 ಯಾ ಡಿಎಂ ನಮಗೆ ಸಂದೇಶ ಕಳುಹಿಸಿ Share your problem with us we suggest you the way to solve it. (at London, Unιted Kingdom) https://www.instagram.com/p/CJulm6lMczi/?igshid=1w5vztdydv76h
0 notes
chamundinews · 4 years
Text
ಚರಂಡಿ ಮಳೆ ನೀರಿನಿಂದ ಕೆಸರಿನ ಗದ್ದೆಗಳಾದ ಹಿರೇಹೆಸರೂರು ಗ್ರಾಮದ ರಸ್ತೆಗಳು ಗ್ರಾಮಸ್ತರ ಆರೋಪ......
Tumblr media
ರಾಯಚೂರು ಜಿಲ್ಲೆಯ ಲಿಂಗಸಗೂರುತಾಲುಕಿನ ಗೆಜ್ಜಲಗಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರೇ ಹೆಸರೊರು ಗ್ರಾಮದಲ್ಲಿ ಮಳೆ ನೀರು ಮತ್ತು ಚರಂಡಿ ನೀರು ನಡು ರಸ್ತೆಯಲ್ಲಿ ನಿಂತ್ತು ಇರುವುದರಿಂದ ರೈತರಿ ಮತ್ತ ದನ ಕರುಗಳಿಗೆ ತುಂಬ ಕಷ್ಟವಾಗಿದೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ . ಸಂಬಂದ ಪಟ್ಟ ಅಧಿಕಾರಿಗಳಿಗೆ ಎಷ್ಟ ಬಾರಿ ಊರಿನ ಗ್ರಾಮಸ್ತರು ಸಂಘಟನೆಕಾರರು ಮನವಿ ಮಾಡಿಕೊಂಡರು ತಲೆ ಕೆಡಿಸಿಕೋಂಡಿಲ್ಲ ಗ್ರಾಮ ಪಂಚಾಯತಿ ಅಧಿಕಾರಿಗಳು ಯಾವದೆ ಕ್ರಮ ಕೈಗೋಳ್ಳುತ್ತಿಲ್ಲ. ಮತ್ತು ನಮ್ಮ ಕ್ಷೇತ್ರದ ಶಾಸಕರು ಗಮನಕ್ಕೆ ಇದ್ದರು ಕೊಡ ತಲೆಕೆಡಿಸಿಕೋಳ್ಳುತ್ತಿಲ್ಲ ಅವರ ವಿರುದ್ದ ಹಿರೇಹೆಸರುರ ಗ್ರಾಮಸ್ಥರು ಆಕ್ರೋಶ ವ್ಯೆಕ್ತಪಡಿಸಿದರು ಇದರ. ಸಂಭಂದಿಸಿದ ಅಧಿಕಾರಿಗಳು ಚರಂಡಿ ನೀರುನ್ನು ಬೇರೆ ವ್ಯೆವಸ್ತೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ( ರಿ ) ಗ್ರಾಮ ಘಟಕ ಅಧ್ಯಕ್ಷರಾದ ಶಿವರಾಜ ನಾಯಕ ರಮೇಶ ನಾಯಕ ಯಲ್ಲಪ್ಮ ಮೌನೇಶ ಮುದುವಾಳ ಮೌನೇಶ ಪುಲುಬಾವಿ ನಾಯಕ , ಹಸೆನಪ್ಪ , ಪರಸಪ್ಪ ಸೇರಿದಂತೆ ಇನ್ನಿತರಿದ್ದರು ವರದಿ : ಆದೇಶ್ ನಗನೂರು ಚಾಮುಂಡಿ ನ್ಯೂಸ್ ಲಿಂಗಸಗೂರು ಸುದ್ದಿ ಮತ್ತು ಜಾಹಿರಾತುಗಳಿಗೆ ಸಂಪರ್ಕಸಿ ಚಾಮುಂಡಿ ನ್ಯೂಸ್         Read the full article
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
[8/6 8:03 ಅಪರಾಹ್ನ] +91 99864 03488: ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಠ್ ವತಿಯಿಂದ ಸಾರ್ಥಕ ಕಾರ್ಯಕ್ರಮ ಮಾಡಿದ್ದೆವೆಂಬ ಖುಷಿ. ಅದು ನಮ್ಮ ಮಣ್ಣಿನ ಅಸ್ಮಿತೆ ಶ್ರೀ ಹೆಚ್ ಡಿ ದೇವೇಗೌಡರು ಈ ದೇಶದ ಉನ್ನತಗಾದಿಗೆ ಏರಿದ ಸವಿ ನೆನಪಿಗಾಗಿ ದೇವೇಗೌಡರ ನೆಚ್ಚಿನ ಆಹಾರ ರಾಗಿ ಮುದ್ದೆ ಹಾಗು ಉಪ್ಪುಸಾರನ್ನು ಆ ದಿನ ಅವರ ನೆನಪಿಗಾಗಿ ಒಂದಷ್ಟು ಕೋವಿಡ್ ರೋಗಿಗಳ ಬಂಧುಗಳಿಗೆ ಮೈಸೂರಿನ ಪ್ರತಿಷ್ಟಿತ ಕೃಷ್ಣರಾಜ ಆಸ್ಪತ್ರೆ ಸಮೀಪ ವಿತರಿಸಿದೆವು.
ಆಹಾರ ಕೊಟ್ಟು ಅದನ್ನು ಪ್ರಚುರ ಪಡಿಸುವುದು ನಮ್ಮ ಉದ್ದೇಶ ಅಲ್ಲ ಬದಲಿಗೆ ಈ ಮೂಲಕ ದೇವೇಗೌಡರ ಸರಳ ಆಹಾರ ಪದ್ಧತಿ ಹಾಗು ರಾಗಿ ಮುದ್ದೆಯ ಶಕ್ತಿಯನ್ನು ಇತರರಿಗೂ ಸಾರುವುದಷ್ಟೇ ಆಗಿತ್ತು.
ದೇವೇಗೌಡರು ಪ್ರಧಾನಿ ಆಗಿದ್ದಾಗಲು ಸಹ ಹುದ್ದೆ ಅವರಿಗೇ ಅಹಂ ತರಲಿಲ್ಲ ಹುಂಬನಾಗಿಸಲಿಲ್ಲ ಅವರ ನೆಚ್ಚಿನ ಆಹಾರದ ಬಗ್ಗೆ ಲಘುವಾಗಿ ಮಾತನಾಡಿದರು ಸಹ ಅದರ ಬಗ್ಗೆ ಕಿಂಚಿತ್ತು ಗಮನ ಕೊಡದೆ ತಮ್ಮ ಆಹಾರದ ಶಿಸ್ತು ಪ್ರದರ್ಶನ ಮಾಡಿದರು, ಒಮ್ಮೊಮ್ಮೆ ವಿದೇಶ ಪ್ರಯಾಣದಲ್ಲಿ ಸಹ ತಮ್ಮ ದೈನಂದಿನ ಆಹಾರ ಪದ್ಧತಿಯನ್ನು ಸವಿದ ಇತಿಹಾಸ ಇದೆ.
ರಾಗಿ ಒಮ್ಮೆ ಬಡವರ ಆಹಾರವಾಗಿತ್ತು ಅನ್ನ ಉಣ್ಣುವವ ಆಗ ಶಕ್ತರೆಂದೆ ಭಾವಿಸುವ ಮಂದಿಯಿದ್ದರು ಆದರೆ ಈಗ ಕಾಲ ಬದಲಾಗಿದೆ ರಾಗಿಯ ಉಪಯೋಗ ಹಾಗು ಅದರ ಅನುಕೂಲದ ಬಗೆ ಜನ ಜಾಗೃತರಾಗಿದ್ದಾರೆ ಆದರೆ ದೇವೇಗೌಡರು ಅಂದಿಗೆ ಅದರ ಅರಿವುಳ್ಳವರಾಗಿದ್ದರು ರೈತಾಪಿ ಕುಟುಂಬದ ಮಡಿಕೆಯ ಮುದ್ದೆ ಪ್ರಧಾನಿ ನಿವಾಸಕ್ಕೆ ಹೋಗಿದ್ದು ಸ್ಮರಣೀಯವಲ್ಲವೆ..
*ಸ��ೀಶ್ ಗೌಡ*✍
[9/6 4:21 ಅಪರಾಹ್ನ] +91 99864 03488: ಇಂದು ಶಾಂತವೇರಿ ಗೋಪಾಲ ಗೌಡರು ನಮ್ಮನ್ನ ಅಗಲಿದ ದಿನ ಹಾಗಾಗೀ ಅವರ ಜೀವನ ಹೋರಾಟ ಬದುಕಬಗೆ ಹೀಗೆ ಹಲವು ವಿಷಯಗಳ ಒಂದು ಅಂಕಣ ನಿಮಗಾಗಿ ನಮಗಾಗೀ....
ರಾಷ್ಟ್ರ, ರಾಜ್ಯ, ಸಮಾಜ, ರಾಜಕೀಯ, ಆಡಳಿತ, ಸಾಹಿತ್ಯ, ಸಂಸ್ಕೃತಿ, ಕಲೆ, ಉದ್ಯಮ, ಅರ್ಥವ್ಯವಸ್ಥೆ – ಅದು ಯಾವುದೇ ವಿಚಾರವಿರಲಿ ಅದರ ಬಗ್ಗೆ ಖಚಿತ, ಸದೃಢ, ಸ್ಪಷ್ಟ ಅಭಿಪ್ರಾಯ. ಗಳನ್ನು ವ್ಯಕ್ತಪಡಿಸುವುದು ಗೋಪಾಲಗೌಡರ ಪ್ರವೃತ್ತಿಯಾಗಿತ್ತು. ಸತ್ಯವನ್ನು ಹೇಳುವುದರಲ್ಲಿ ಸಂಕೋಚವಿರಲಿಲ್ಲ; ಮಾತಿಗೆ ಮಂತ್ರ ಶಕ್ತಿಯನ್ನು ಕೊಡುವ ವ್ಯಕ್ತಿತ್ವದ ಹಿನ್ನೆಲೆ – ಅದಕ್ಕಾಗಿ ಅವರ ಮಾತಿಗೆ ತುಂಬ ಬೆಲೆ. ಅಧಿಕಾರಸ್ಥ ಸರ್ಕಾರ ತಲ್ಲಣಗೊಳ್ಳುವಂತಹ ಗರ್ಜನೆ; ವೈರಿಯೂ ಒಪ್ಪುವಂತಹ ವಿಚಾರಧಾರೆ. ಉಗ್ರವಾದಿಯಾಗಿದ್ದ ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಶೀಘ್ರಕೋಪ ಉಕ್ಕಿ ಬರುತ್ತಿತ್ತಾದರೂ ಅದು ಆಧಾರರಹಿತ ವಾಗಿರುತ್ತಿರಲಿಲ್ಲ. ವಿಶಿಷ್ಟ ಸನ್ನಿವೇಶಗಳನ್ನು ಉಂಟು ಮಾಡುವುದರಲ್ಲಿ, ಬಹಳ ಮಟ್ಟಿಗೆ ಪ್ರಥಮಸ್ಥಾನ ಪಡೆದಿದ್ದ ಗೋಪಾಲಗೌಡರು, ಅಂತಹ ಸನ್ನಿವೇಶಗಳಿಗೆ ಅರ್ಥಪೂರ್ಣ ಹಿನ್ನೆಲೆ ಇದೆ ಎಂಬುದನ್ನು ತೋರಿಸಿ ಕೊಡುತ್ತಿದ್ದರು.
ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಚೋದಕ ಶಕ್ತಿಯಾಗಿ ರೂಪುಗೊಂಡ ಗೋಪಾಲ ಗೌಡರ ಬೆಳವಣಿಗೆಯ ಹಿನ್ನೆಲೆ ಮನಮುಟ್ಟುವಂತಹ ಘಟನೆಗಳಿಂದ ಕೂಡಿದೆ. ವಿದ್ಯಾಭ್ಯಾಸದ ಹಾದಿ ಅಡಚಣೆಗಳ ಆಗರವಾಗಿ ಪರಿಣಮಿಸಿತಾದರೂ ವಿಶಾಲವಾದ ಸಮಾಜ ಜೀವನ, ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಸನ್ನಿವೇಶ, ರಾಜಕೀಯ ರಂಗದ ರಂಗುರಂಗಿನ ಘಟನೆಗಳು ಅವರ ವ್ಯಕ್ತಿತ್ವ ನಿರೂಪಣೆಗೆ ಪೋಷಣೆ ನೀಡಿದವು; ರಾಜಕೀಯ ಮುತ್ಸದ್ದಿಯನ್ನಾಗಿ ಕಡೆದು ನಿಲ್ಲಿಸಿದವು.
ಶಾಂತವೇರಿ ಗೋಪಾಲಗೌಡರ ಬಾಲ್ಯ, ಬೆಳವಣಿಗೆ ಶಿಕ್ಷಣ – ಮೊದಲಾದ ಎಲ್ಲ ಹಂತಗಳೂ ಗಮನಿಸುವಂತಹ ಪ್ರಸಂಗಗಳು.
ಬಡತನದ ಕುಟುಂಬ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿ ನಲ್ಲಿರುವ ಆರಗದ ರೈತ ಕುಟುಂಬದಲ್ಲಿ ಶಾಂತವೇರಿ ಗೋಪಾಲಗೌಡರ ಜನನ. ೧೯೨೩ನೆಯ ಇಸವಿ ಮಾರ್ಚ್ ೧೪ ರಂದು ಕೊಲ್ಲೂರಯ್ಯ ಮತ್ತು ಶೇಷಮ್ಮನವರ ಮೂರನೆಯ ಮಗುವಾಗಿ ಜನಿಸಿದರು. ಅಣ್ಣ ಧರ್ಮಯ್ಯಗೌಡ; ಅಕ್ಕ ಸಿದ್ಧಮ್ಮ. ಇವರ ತಾತ ಲೋಕಣ್ಣಗೌಡರು ಅನುಕೂಲಸ್ಥರಾಗಿದ್ದರು. ಆದರೆ, ತಂದೆ ಕೊಲ್ಲೂರಯ್ಯನವರು ಬಡತನದ ಸುಳಿಯಲ್ಲಿ ಸಿಕ್ಕರು.
ಓದು- ಬರಹಗಳನ್ನು ಬಲ್ಲ ಕೊಲ್ಲೂರಯ್ಯ ನವರು ಅಂಚೆಪೇದೆಯಾಗಿ ಕೆಲಸಕ್ಕೆ ಸೇರಿದರು; ಕೇವಲ ಹನ್ನೊಂದು ರೂಪಾಯಿಯ ಸಂಬಳ. ಅಂಚೆ ವಿತರಣೆಗಾಗಿ ಅನೇಕ ಹಳ್ಳಿಗಳನ್ನು ತಿರುಗಬೇಕಾಗಿತ್ತು. ಕವಲೇದುರ್ಗ, ಕೊಳವಳ್ಳಿ, ಹೊಸಗದ್ದೆ, ನಿಲುವಾಸೆ ಮೊದಲಾದ ಹಳ್ಳಿಗಳಿಗೆ ಅವರ ಅಂಚೆ ಯಾತ್ರೆ.
ಬಡತನದ ಬದುಕು ಗೋಪಾಲಗೌಡರ ಪಾಲಿಗಿತ್ತಾದರೂ ದೈವದತ್ತವಾದ ಮಲೆನಾಡ ಪ್ರಕೃತಿ ಸಂಪತ್ತಿನ ಮಡಿಲಲ್ಲಿ ಬೆಳೆದ ಅವರ ಮೈ- ಮನಸ್ಸುಗಳ ಮೇಲೆ ಮಧುರ ಪ್ರಭಾವ ಮೂಡಿ ಬಂದಿತು.
ದನಕಾಯುವ ಹುಡುಗನ ವಿದ್ಯಾಭ್ಯಾಸ ನಿಲ್ಲಿಸಬೇಡಿ
ಗೋಪಾಲಗೌಡರ ಪ್ರಾಥಮಿಕ ವಿದ್ಯಾಭ್ಯಾಸ ಆರಗದಲ್ಲಿಯೇ ನಡೆಯಿತು. ಮುಂದಿನ ವಿದ್ಯಾಭ್ಯಾಸ ಕ್ಕಾಗಿ ಬೇರೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ. ಅಂಚೆಪೇದೆ ಕೆಲಸದ ಜೊತೆಗೆ ಸಣ್ಣ ವ್ಯವಸಾಯವನ್ನೂ ಇಟ್ಟುಕೊಂಡಿದ್ದ ಕೊಲ್ಲೂರಯ್ಯ ನವರಿಗೆ ನೆರವು ನೀಡುವುದು; ದನ ಮೇಯಿಸುವುದು; ಕಾಡು ಮೇಡುಗಳಲ್ಲಿ ತಿರುಗಾಡಿ ಸೊಪ್ಪು ಸದೆ ಹೊತ್ತು ತರುವುದು- ಇವೇ ಮೊದಲಾದ ಕಾಯಕಷ್ಟದ ಕೆಲಸಗಳಲ್ಲಿ ತೊಡಗಿದರು.
ಗೋಪಾಲಗೌಡರು ದನಕಾಯುವ ಕಾಯಕ ದಲ್ಲಿ ತೊಡಗಿದ್ದಾಗ ಒಂದು ದಿನ ಒಂದು ಘಟನೆ ನಡೆಯಿತೆಂದು ಪ್ರತೀತಿ. ಉತ್ತರ ಕರ್ನಾಟಕದ ಸ್ವಾಮಿಗಳೊಬ್ಬರು ದನ ಮೇಯಿಸುವ ಹುಡುಗನನ್ನು ಅಕಸ್ಮಾತ್ತಾಗಿ ನೋಡಿದರಂತೆ. ಆತನ ಕಡೆಗೆ ಆಕರ್ಷಣೆಯಾಯಿತಂತೆ! ಆತನನ್ನು ಮಾತನಾಡಿಸಿ, ಎಲ್ಲ ವಿಚಾರಗಳನ್ನೂ ತಿಳಿದುಕೊಂಡು, ಕಣ್ಣುಗಳ ಹೊಳಪನ್ನೂ ಹಸ್ತರೇಖೆಯನ್ನೂ ನೋಡಿ ‘ನೀನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು’ ಎಂದು ತಿಳಿಸಿದರಂತೆ. ಆಗ ಆತ ಅಸಹಾಯಕತೆಯನ್ನು ತೋಡಿಕೊಂಡನಂತೆ. ಎಲ್ಲವನ್ನೂ ಕೇಳಿ ತಿಳಿದುಕೊಂಡ ಸ್ವಾಮಿಗಳು ಕೊಲ್ಲೂರಯ್ಯನವರ ಬಳಿಗೆ ಹೋಗಿ ‘ನಿಮ್ಮ ಮಗನಿಗೆ ಒಳ್ಳೆಯ ಭವಿಷ್ಯವಿದೆ. ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ಹೇಗಾದರೂ ಮಾಡಿ ಓದಿಸಲೇಬೇಕು….’ ಎಂದು ಸಲಹೆ ಮಾಡಿ ಹೊರಟು ಹೋದರಂತೆ.
ಅಷ್ಟರಲ್ಲಿ, ಗೋಪಾಲಗೌಡರ ಅಣ್ಣ ಧರ್ಮಯ್ಯ ಗೌಡರು ಶಿಕಾರಿಪುರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರಾದರು. ಹೀಗಾದದ್ದರಿಂದ ಗೋಪಾಲಗೌಡರ ವಿದ್ಯಾಭ್ಯಾಸ ಮುಂದುವರಿಯಲು ಸಹಾಯಕವಾಯಿತು. ಶಿಕಾರಿ ಪುರದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಮುಗಿಸಿದರು.
ಸಮಾಜವಾದಕ್ಕೆ
ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನೂ, ಕೆಚ್ಚನ್ನೂ ತುಂಬಿಕೊಂಡಿದ್ದ ಶಾಂತವೇರಿ ಗೋಪಾಲಗೌಡರನ್ನು ಮೈಸೂರು ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕೀಯ ರಂಗ ಕೈಬೀಸಿ ಕರೆಯಿತು. ಅದರಿಂದ ಅವರು ಆಕರ್ಷಿತರಾದರು.
೧೯೪೭ರ ಸ್ವತಂತ್ರ ಭಾರತ ಚುರುಕಾದ ರಾಜಕೀಯ ಚಟುವಟಿಕೆಗಳನ್ನು ಕಂಡುಕೊಂಡಿತು. ಎಲ್ಲ ಪಕ್ಷಗಳವರೂ ಚುರುಕಾದಂತೆ ಸಮಾಜವಾದಿಗಳು ಸಹ ತೀವ್ರ ಚಟುವಟಿಕೆಯಲ್ಲಿ ತೊಡಗಿದರು. (ಸಮಾಜವಾದಿಗಳು ದೇಶದ ಸಂಪತ್ತೆಲ್ಲ ಸಮಾಜಕ್ಕೆ ಸೇರಿದ್ದು; ಮುಖ್ಯ ಉತ್ಪಾದನೆಗಳನ್ನು ಮಾಡುವ ಉದ್ಯಮಗಳು ಸರ್ಕಾರದ ಕೈಯಲ್ಲಿರಬೇಕು. ಅವುಗಳ ಪ್ರಯೋಜನ, ಲಾಭ ಇಡೀ ಸಮಾಜಕ್ಕೆ ದೊರಕಬೇಕು ಎಂದು ಪ್ರತಿಪಾದಿಸುತ್ತಾರೆ). ಜಯಪ್ರಕಾಶ ನಾರಾಯಣ್, ಡಾಕ್ಟರ್ ರಾಮಮನೋಹರ ಲೋಹಿಯಾ ಮೊದಲಾದವರು ಸಮಾಜವಾದದ ಹಿರಿಯ ನಾಯಕರು. ಅವರು ದೇಶದಾದ್ಯಂತ ಸಂಚಾರ ಮಾಡಿದರು; ಕರ್ನಾಟಕಕ್ಕೂ ಬಂದರು. ಸಮಾಜ ಪ್ರಜ್ಞೆಯ ತರುಣ ಸಮೂಹವನ್ನು ತಮ್ಮ ವಿಚಾರಧಾರೆಯತ್ತ ಸೆಳೆದರು. ಹಾಗೆ ಸೆಳೆಯಲ್ಪಟ್ಟವರಲ್ಲಿ ಗೋಪಾಲಗೌಡರೂ ಒಬ್ಬರು. ಆ ವೇಳೆಗಾಗಲೇ ರಾಜ್ಯದ ಅನೇಕ ಗಣ್ಯ ರಾಜಕೀಯ ಮುಖಂಡರ ಸಂಪರ್ಕವನ್ನು ಬೆಳೆಸಿಕೊಂಡು ಅವರು ಸಂಪೂರ್ಣ ವಾಗಿ ರಾಜಕೀಯ ರಂಗಕ್ಕೆ ಧುಮುಕಿದರು.
ರೈತರು ದೀನದಲಿತರಿಗಾಗಿ
ಸಮಾಜವಾದದ ಸೆಳೆತಕ್ಕೆ ಸಿಕ್ಕಿ ಶಾಂತವೇರಿ ಯವರು ಸಹಜವಾಗಿಯೇ ರೈತರ, ದೀನದಲಿತರ ಸ್ಥಿತಿ ಗತಿಯ ಕಡೆಗೆ ಗಮನ ಹರಿಸಿದರು. ತೀರ್ಥಹಳ್ಳಿ ಮತ್ತು ಸಾಗರ ಪ್ರದೇಶದ ರೈತರ ಸಂಘಟನೆಯಲ್ಲಿ ತೊಡಗಿದುದು ಆಗಲೇ. ಆ ವೇಳೆಗಾಗಲೇ ತೀರ್ಥಹಳ್ಳಿಯಲ್ಲಿ ಮಲೆನಾಡು ಗೇಣಿದಾರರ ಸಂಘವು, ಸಾಗರದಲ್ಲಿ ರೈತ ಸಂಘವು ಅಸ್ತಿತ್ವಕ್ಕೆ ಬಂದಿದ್ದವು. ಸಮಾಜವಾದಿ ಪಕ್ಷದ ‘ಹಿಂದ್ ಕಿಸಾನ್ ಪಂಚಾಯಿತಿ’ ಯಲ್ಲಿ ಈ ಸಂಘಗಳನ್ನು ವಿಲೀನಗೊಳಿಸಿ ೧೯೪೮ರಲ್ಲಿ ತೀರ್ಥಹಳ್ಳಿಯಲ್ಲಿ ದೊಡ್ಡ ರೈತ ಸಮ್ಮೇಳನವನ್ನೇ ನಡೆಸಿದರು. ತಮ್ಮ ಸಂಘಟನಾಚಾತುರ್ಯವನ್ನು ತೋರಿಸಿಕೊಟ್ಟರು. ಅಂದಿನ ಆ ಸಮ್ಮೇಳನಕ್ಕೆ ಅಖಿಲ ಭಾರತ ಶ್ರೇಣಿಯಲ್ಲಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ, ರಮಾನಂದನ ಮಿಶ್ರ ಮೊದಲಾದ ಹಿರಿಯರನ್ನು ಆಹ್ವಾನಿಸಿದ್ದರು. ಅಂದಿನಿಂದ ಗೋಪಾಲಗೌಡರ ಹೆಸರು ಅಖಿಲ ಭಾರತ ಮಟ್ಟದ ಸಮಾಜವಾದಿ ನಾಯಕರಿಗೆ ಪರಿಚಯವಾಯಿತು; ಅವರ ಜತೆ ನಿಕಟ ಸಂಪರ್ಕ ಬೆಳೆಯಿತು. ಡಾಕ್ಟರ್ ರಾಮಮನೋಹರ ಲೋಹಿಯಾ ಅವರ ಪ್ರಭಾವಕ್ಕೊಳಗಾದ ಅವರು ಹೊಸ ಹುರುಪನ್ನೇ ತಳೆದರು; ಪ್ರಖರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಹಿಂದಿಯಲ್ಲಿ ಸೊಗಸಾಗಿ ಭಾಷಣ ಮಾಡುತ್ತಿದ್ದ ಗೋಪಾಲಗೌಡರು ಉತ್ತರ ಭಾರತದಲ್ಲಿಯೂ ಪ್ರಸಿದ್ಧಿ ಪಡೆದಿದ್ದರೆಂಬುದು ಗಮನಿಸಬೇಕಾದ ಅಂಶ.
ಕಾಗೋಡು ಸತ್ಯಾಗ್ರಹ
ರೈತ ಸಂಘಟನೆಯಲ್ಲಿ ಹೆಚ್ಚು ಒಲವು ತೋರಿಸಿದ ಗೌಡರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ರೂಪುಗೊಂಡ, ಕಾಗೋಡು ರೈತ ಸತ್ಯಾಗ್ರಹವನ್ನು ನಡೆಸಿದರು. ಕಾಗೋಡು ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿ. ಅಲ್ಲಿ ರೈತರು ಜಮೀನ್ದಾರರ ಅನ್ಯಾಯಗಳನ್ನು ಪ್ರತಿಭಟಿಸಿದರು. ಜಮೀನ್ದಾರರಿಗಾಗಿ ದುಡಿದು ಅದರ ಲಾಭವನ್ನೆಲ್ಲ ಅವರಿಗೊಪ್ಪಿಸಿ ಅವರ ದಯೆಯಿಂದ ರೈತರು ಬಾಳುವಂತಾಗಿತ್ತು. ಧಾನ್ಯ ಒಪ್ಪಿಸುವಾಗ ಬಳಸುವ ಅಳತೆ ಕೂಡ, ನ್ಯಾಯವೋ ಅಲ್ಲವೋ, ಜಮೀನ್ದಾರರು ಹೇಳಿದಂತೆ ಆಗಬೇಕಾಗಿತ್ತು. ಎಷ್ಟೋ ಮಂದಿ ಜೀತದಾಳುಗಳಾಗಿದ್ದರು. ಗಂಡಸರು ಮೊಣಕಾಲಿನಿಂದ ಮೇಲೆ ಪಂಚೆ ಉಡಬೇಕು. ಹೆಂಗಸರು ಸೀರೆಯನ್ನು ಕಾಲಿನತನಕ ಉಡಕೂಡದು. ಇಂತಹ ನಿರ್ಬಂಧಗಳು. ರೈತರು ತಿರುಗಿಬಿದ್ದರು. ಅದು ಗೋಪಾಲಗೌಡರ ಸತ್ವಪರೀಕ್ಷೆಯ ಘಟನೆಯಾಯಿತು. ಜಮೀನ್ದಾರರು ರೈತರನ್ನು ಗೇಣಿಯಿಂದ ತೆಗೆದು ಹಾಕಿದರು. ಸಮಾಜವಾದಿ ಪಕ್ಷದವರ ನಾಯಕತ್ವದಲ್ಲಿ ರೈತರು ಗುಂಪುಗುಂಪಾಗಿ ಗದ್ದೆಗಿಳಿದರು. ಪೊಲೀಸರು ತಡೆದು ದಸ್ತಗಿರಿ ಮಾಡಿದರು. ಸತ್ಯಾಗ್ರಹದಲ್ಲಿ ಗೌಡರು ‘ಸೈ’ ಎನಿಸಿಕೊಂಡರು. ೧೯೫೧ರಲ್ಲಿ ನಡೆದ ಆ ಸತ್ಯಾಗ್ರಹಕ್ಕೆ ಡಾಕ್ಟರ್ ಲೋಹಿಯಾ ಅವರೂ ಬಂದಿದ್ದರು. ಸತ್ಯಾಗ್ರಹ ನಡೆಸಿ ಕಾರಾಗೃಹ ಸೇರಿದರು. ಹೆಸರಾಂತ ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲಿ ಅನೇಕಮಂದಿ ಪ್ರಭಾವೀ ತರುಣರು ಸಮಾಜವಾದದತ್ತ ತಿರುಗಿದರು. ಮುಂದೆ ಪ್ರಮುಖ ವ್ಯಕ್ತಿಗಳಾಗಿ ರೂಪುಗೊಂಡರು.
ಕಾಗೋಡು ಸತ್ಯಾಗ್ರಹವನ್ನು ಯಶಸ್ವಿಯಾಗಿ ನಡೆಸಿದ ಗೋಪಾಲಗೌಡರು ‘ಹಿಂದ್ ಕಿಸಾನ್ ಪಂಚಾಯತಿ’ಯ ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ನಿಯೋಜಿತರಾದರು.
ವಿಧಾನಸಭೆಯಲ್ಲಿ
೧೯೫೨ರ ವೇಳೆಗೆ ಜನಪ್ರಿಯ ತರುಣ ನಾಯಕರಾಗಿ ಬೆಳೆದ ಗೋಪಾಲಗೌಡರು ಪ್ರಥಮ ಮಹಾಚುನಾವಣೆಯಲ್ಲಿ ಗೆದ್ದು ಮೈಸೂರು ವಿಧಾನಸಭೆಯ ಸದಸ್ಯರಾದರು. ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿ ಸದಾ ಸುದ್ದಿ ಯಲ್ಲಿರುತ್ತಿದ್ದರು. ಸತ್ಯ ಪ್ರತಿಪಾದನೆಯಲ್ಲಿ ಎತ್ತಿದ ಕೈ! ಅನ್ಯಾಯವನ್ನು ಸಹಿಸುವ ಜಾಯಮಾನ ಅವರದಲ್ಲ. ವಿಧಾನಸಭೆಯಲ್ಲಿ ನಿಷ್ಠುರವಾದಿಗಳ ಅಗ್ರ ಪಂಕ್ತಿಯಲ್ಲಿದ್ದರು.
ಗೋಪಾಲಗೌಡರು ವಿಧಾನಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳ ಪ್ರತಿಪಾದಕರಾಗಿದ್ದರು. ಗಂಡಭೇರುಂಡ ಹಿಂದಿನ ಮೈಸೂರು ರಾಜಮನೆತನದ ಲಾಂಛನ. ರಾಜತ್ವವನ್ನು ಗೋಪಾಲಗೌಡರು ವಿರೋಧಿಸುತ್ತಿದ್ದರು. ಅಠಾರ ಕಛೇರಿ ಮೇಲಿನ ಗಂಡಭೇರುಂಡ ಧ್ವಜವನ್ನು ಕೆಳಗಿಳಿಸುವ ನಿರ್ಣಯ ತಂದರು. ಕರ್ನಾಟಕ ಏಕೀಕರಣಕ್ಕೆ ಬೆಂಬಲ ನೀಡುವ, ಕೋಲಾರದ ಚಿನ್ನದ ಗಣಿಯನ್ನು ರಾಷ್ಟ್ರೀಕರಣ ಮಾಡುವ, ರಸ್ತೆ ಸಾರಿಗೆಯನ್ನು ರಾಷ್ಟ್ರೀಕರಣ ಮಾಡುವ ಇವೇ ಮೊದಲಾದ ನಿರ್ಣಯಗಳ ಪ್ರತಿಪಾದಕರಾದರು.
ಭೂಸುಧಾರಣೆಗೆ ನಾಂದಿಯಾದ ಗೇಣಿ ಶಾಸನ ಮತ್ತು ಇನಾಂ ರದ್ದತಿ ಶಾಸನಗಳ ಬಗೆಗೆ ಜನಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾದರು.
ಅಖಂಡ ಕರ್ನಾಟಕಕ್ಕಾಗಿ
ಗೋಪಾಲಗೌಡರು ಕಟ್ಟಾ ಕರ್ನಾಟಕ ವಾದಿಗಳು. ಹರಿದು ಹಂಚಿಹೋಗಿದ್ದ ಕನ್ನಡನಾಡು ಒಂದುಗೂಡಬೇಕೆಂಬುದು ಅವರ ಉತ್ಕಟೇಚ್ಛೆ ಯಾಗಿತ್ತು. ಇದರ ಸಾಧನೆಯಲ್ಲಿ ತೊಡಗಿದ್ದ ಹಿರಿಯರಿಗೆ ಪರಿಪೂರ್ಣ ಬೆಂಬಲ ನೀಡಿದರು. ಏಕೀಕರಣಕ್ಕೆ ಸಂಬಂಧಿಸಿದ ಯಾವುದೇ ಸಭೆ ಸಮ್ಮೇಳನಗಳಲ್ಲಿ ಮುಂಚೂಣಿಯಾಗಿ ನಿಲ್ಲುವುದು ಅವರ ಸ್ವಭಾವ. ಏಕೀಕರಣದ ಪರ ಮತ್ತು ವಿರೋಧಿ ಬಣಗಳ ನಡುವೆ ಕೊಂಡಿಯಂತೆ ಕೆಲಸ ಮಾಡಿದವ ರವರು. ಏಕೀಕರಣವಾಗದ ಹೊರತು, ಕನ್ನಡಿಗರ ಹಾಗೂ ಕನ್ನಡದ ಉದ್ಧಾರ ಸಾಧ್ಯವಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ರಾಜ್ಯ ಪುನರ್ ವಿಂಗಡಣೆಯ ನಿರ್ಧಾರಕ್ಕಾಗಿ ಭಾರತ ಸರ್ಕಾರ ನೇಮಿಸಿದ ಫಜಲ್ ಅಲಿ ಆಯೋಗವು ಕರ್ನಾಟಕಕ್ಕೆ ಭೇಟಿ ಇತ್ತಾಗ, ಕನ್ನಡಿಗರ ಪರ ವಾದವನ್ನು ಮಂಡಿಸಿದ ಪ್ರಮುಖರಲ್ಲಿ ಅವರೂ ಒಬ್ಬರು. ಗೋಪಾಲಗೌಡರು ಶಾಸಕರಾಗಿದ್ದಾಗಲೇ, ೧೯೫೬ರ ನವೆಂಬರ್ ಒಂದರಂದು ಕರ್ನಾಟಕ ಏಕೀಕರಣವಾಯಿತು.
೧೯೫೭ರ ಮಹಾಚುನಾವಣೆಯಲ್ಲಿ ಗೋಪಾಲಗೌಡರು ಸೋತರು. ಆದರೆ, ರಾಜಕೀಯ ವಾಗಿ ಹಿಂದೆ ಬೀಳಲಿಲ್ಲ. ಕರ್ನಾಟಕದಲ್ಲಿ ರಾಮಮನೋಹರ ಲೋಹಿಯಾ ಸಮಾಜವಾದಿ ಪಕ್ಷವನ್ನು ಸಂಘಟಿಸುವುದರಲ್ಲಿ ನಿರತರಾದರು. ಆ ಮೂಲಕ ಸಮಾಜದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ತೊಡಗಿದರು. ಜನತೆಯ ಆಶೋತ್ತರಗಳ ಈಡೇರಿಕೆಗಾಗಿ ಆಗಾಗ ಚಳುವಳಿ, ಸತ್ಯಾಗ್ರಹಗಳನ್ನು ನಡೆಸಿದರು. ಸೆರೆಮನೆವಾಸಗಳನ್ನು ಅನುಭವಿಸಿದರು.
ಮತ್ತೆ ೧೯೬೨ರ ಮಹಾಚುನಾವಣೆಯಲ್ಲಿ ವಿಜಯ ಸಾಧಿಸಿ, ಹೆಚ್ಚು ಪುಷ್ಟಿಯುತರಾಗಿ ವಿಧಾನಸಭೆಯನ್ನು ಪ್ರವೇಶಿಸಿದರು. ಅಂದಿನಿಂದ ೧೯೭೨ ರ ವರೆಗೆ ವಿಧಾನಸಭಾ ಸದಸ್ಯರಾಗಿದ್ದು, ಒಂದು ಬಗೆಯ ಇತಿಹಾಸವನ್ನೇ ನಿರ್ಮಿಸಿದರು. ೧೯೭೨ರಲ್ಲಿ ಆರೋಗ್ಯ ಇಳಿಮುಖವಾಗುವವರೆಗೆ ರಾಜಕೀಯ ರಂಗದ ಮೂಲಕ ಸಮಾಜ ಸೇವೆಯನ್ನು ನಿಷ್ಠೆಯಿಂದ ಮಾಡಿದರು. ೧೯೭೨ರಲ್ಲಿ ತಮ್ಮ ಸ್ಪರ್ಧಾಕ್ಷೇತ್ರವನ್ನು (ತೀರ್ಥಹಳ್ಳಿ) ಕೋಣಂದೂರು ಲಿಂಗಪ್ಪನವರಿಗೆ ಬಿಟ್ಟುಕೊಟ್ಟು ಆಶೀರ್ವಾದ ಮಾಡಿದರು.
ಕುಟುಂಬ ಜೀವನ
ಗೋಪಾಲಗೌಡರ ಮದುವೆಯಾದುದು ೧೯೬೪ರಲ್ಲಿ. ಧಾರವಾಡದ ಪ್ರಸಿದ್ಧ ವಕೀಲರೂ ಸಮಾಜಸೇವಕರೂ ವಿಚಾರವಾದಿಗಳೂ ಆದ ದೇವನಗೌಡ ಲಿಂಗನಗೌಡ ಪಾಟೀಲರ ಮಗಳು ಸೋನಕ್ಕ ಇವರ ಮಡದಿಯಾದರು. ಗೋಪಾಲಗೌಡ ದಂಪತಿಗಳಿಗೆ ಇಬ್ಬರೇ ಮಕ್ಕಳು. ಮಗಳು ಇಳಾಗೀತ ೧೯೬೭ರ ಮಾರ್ಚ್ ತಿಂಗಳಲ್ಲಿ ಹುಟ್ಟಿದಳು; ಒಂದು ವರ್ಷ ಒಂದು ತಿಂಗಳ ನಂತರ, ಅಂದರೆ ೧೯೬೮ರ ಏಪ್ರಿಲ್‌ನಲ್ಲಿ ಅವರ ಮಗ ರಾಮಮನೋಹರ ಜನಿಸಿದ. ಬೆಂಗಳೂರು ನಗರದ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಉಪಾಧ್ಯಾಯನಿಯಾಗಿದ್ದ ಶ್ರೀಮತಿ ಸೋನಕ್ಕ ಅವರು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದಾರೆ.
ಗೋಪಾಲಗೌಡರು ತಮ್ಮ ಮಗಳಿಗೆ ‘ಇಳಾಗೀತ’ ಎಂದು ಹೆಸರಿಟ್ಟ ಪ್ರಸಂಗ ಬಹಳ ಮನೋಜ್ಞವಾಗಿದೆ. ಡಾಕ್ಟರ್ ವಿ.ಕೃ ಗೋಕಾಕ್ ಅವರ ‘ಇಳಾಗೀತ’ ಕಾವ್ಯವನ್ನು ಓದಿ, ಮೋಹಿತರಾಗಿದ್ದರಿಂದ ತಮ್ಮ ಮಗಳಿಗೆ ಅದೇ ಹೆಸರನ್ನಿಟ್ಟರಂತೆ. ಆಧುನಿಕ ಸಾಹಿತ್ಯ ಬೆಳವಣಿಗೆಯನ್ನು ಗೌಡರು ಎಷ್ಟೊಂದು ಗಾಢವಾಗಿ ಅವಲೋಕಿಸುತ್ತಿದ್ದರೆಂಬುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ.
ಗೋಪಾಲಗೌಡರು ದಾಂಪತ್ಯ ಜೀವನಕ್ಕೆ ಕಾಲಿಟ್ಟರಾದರೂ, ರಾಜಕೀಯ ಮತ್ತು ಸಾಮಾಜಿಕ ಕರ್ತವ್ಯಗಳ ಕರೆಯನ್ನು ಕಡೆಗಣಿಸಲು ಸಾಧ್ಯವಾಗಲಿಲ್ಲ. ದಾಂಪತ್ಯ ಜೀವನದ ಮೂರುನಾಲ್ಕು ವರ್ಷಗಳ ನಂತರ, ರಾಜಕೀಯ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೇ ಹೆಚ್ಚು ಕಾಲವನ್ನು ಗೌಡರು ಮೀಸಲಿರಿಸಿದ್ದರು. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಲಿಲ್ಲ. ಅದು ಕೆಡುತ್ತಾ ಬಂದಿತು. ಎಂಟು ವರ್ಷ ಗಳ ದಾಂಪತ್ಯ ಜೀವನ ನಡೆಸಿ, ರಾಷ್ಟ್ರಾಭಿವೃದ್ಧಿಯ ಚಿಂತನೆಯಲ್ಲಿಯೇ ೧೯೭೨ರಲ್ಲಿ ತೀರಿಕೊಂಡರು.
ಸಮಾಜದ ಚಿಂತನೆಯೇ ಉಸಿರು
ಗೋಪಾಲಗೌಡರಿಗೆ ಸಮಗ್ರ ಸಮಾಜದ ಚಿಂತನೆಯೇ ಜೀವನದ ಉಸಿರಾಗಿತ್ತು. ಸಣ್ಣಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಂಡವರಲ್ಲ. ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ ಮೊದಲಾದ ಎಲ್ಲ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಜಾಗೃತಮನಸ್ಕರಾಗಿದ್ದ ಗೌಡರು, ದೀನದಲಿತರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ, ಮಾನವ ಧರ್ಮದ ಜಾಗೃತಿಯ ಬಗ್ಗೆ ಹೃದಯ ತುಂಬಿದ ಕಾಳಜಿಯನ್ನು ಹೊಂದಿದ್ದರು.
ಒಮ್ಮೆ ವಿಧಾನಸಭೆಯಲ್ಲಿ ಮಾತನಾಡುತ್ತ ‘ನನ್ನ ದೃಷ್ಟಿ ಸಾಮಾನ್ಯವಾಗಿ ರಾಜಕೀಯ ದೃಷ್ಟಿ. ಸಮಾಜದಲ್ಲಿ ಹೆಚ್ಚಾಗಿ ಆರ್ಥಿಕ ಸಮಾನತೆ ಉಂಟಾಗಬೇಕು. ಸಮಾನತೆ ಇರಬೇಕು, ಸ್ವಾತಂತ್ರ್ಯ ಇರಬೇಕು ಎಂಬುದನ್ನೇ ಪ್ರಾಮುಖ್ಯವಾಗಿ ನೋಡುವವನು’ ಎಂದರು. ಮತ್ತೊಮ್ಮೆ ನಿಮ್ನವರ್ಗ ದವರನ್ನು ಕುರಿತು ಮಾತನಾಡುತ್ತ, ‘ಈ ಜನಾಂಗ ಶತಶತಮಾನಗ ಳಿಂದಲೂ ಕೆಳಗೆ ಒತ್ತಲ್ಪಟ್ಟಿದೆ. ನೂರಾರು ವರ್ಷಗಳಿಂದ ಈ ಜನಾಂಗ, ಇತರ ಜನಾಂಗಗಳವರ ಅಭಿವೃದ್ಧಿಗೆ ಕೊಟ್ಟಿರುವ ಸಾಲವನ್ನು ತೀರಿಸಲು ನಾವೆಲ್ಲರೂ ತೆರಬೇಕಾದ ಋಣ ಬಹಳವಾಗಿದೆ’ ಎಂದರು.
ವ್ಯಕ್ತಿತ್ವ , ಸೇವೆ
ಗೋಪಾಲಗೌಡರು ಕೆಲವೊಮ್ಮೆ ಸಿಟ್ಟು ಸೆಡವು ಗಳಿಂದ ಆವೃತ್ತರಾಗಿ, ಮೈಮರೆತು ನಡೆದುಕೊಳ್ಳುವಂತೆ ಕಂಡುಬಂದರೂ (ದೇಹದ ಸ್ಥಿತಿಯಿಂದಾಗಿ ಹಾಗಾಗು ತ್ತಿತ್ತೆಂಬುದು ಕೆಲವು ಆಪ್ತೇಷ್ಟರ ಅನಿಸಿಕೆ) ಅವರ ನಿಷ್ಠಾಪೂರ್ಣ ಸೇವೆಯ ಮುಂದೆ ಅಂತಹ ಕ್ಷಣಿಕ ಸಂದರ್ಭಗಳು ನಿಲ್ಲುತ್ತಿರಲಿಲ್ಲ. ಅವರು ಅನೇಕ ವಿಚಾರಗಳಲ್ಲಿ ಅನುಕರಣೀಯ ಶಾಸಕರಾಗಿ, ವಿಧಾನಸಭೆಯ ಕರ್ತವ್ಯ ನಿರೂಪಣೆಯ ಮಹತ್ವವನ್ನು ತೋರಿಸಿಕೊಟ್ಟರು.
ಅಧಿಕಾರಕ್ಕಾಗಿ ಎಂದೂ ಆಸೆಪಡದ ಗೌಡರು ಪ್ರಾಮಾಣಿಕವಾದ ಜೀವನಕ್ಕಾಗಿ ಅಪೇಕ್ಷೆಪಟ್ಟವರು. ಆತ್ಮಾಭಿಮಾನ ಅವರ ಆಸ್ತಿಯಾಗಿತ್ತು, ವ್ಯಕ್ತಿಜೀವನಕ್ಕೂ ಇದನ್ನೇ ಅಳತೆಗೋಲಾಗಿಸುವ ಆತುರ ಅವರದಾಗಿತ್ತು.
ಗೋಪಾಲಗೌಡರು ಹುಟ್ಟು ಧೀಮಂತ ರಾದ್ದರಿಂದ, ಯಾವ ಕ್ಷೇತ್ರದಲ್ಲಿ ಕಾಲಿಟ್ಟರೂ ಎತ್ತರಕ್ಕೆ ಬೆಳೆವ ಶಕ್ತಿಯುಳ್ಳವರಾಗಿದ್ದರು.ಅವರು ಸಾಹಿತ್ಯಕ್ಷೇತ್ರದಲ್ಲಿ ಪೂರ್ಣಪ್ರವೇಶ ಮಾಡಿದ್ದರೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದ್ದರೆಂಬುದರಲ್ಲಿ ಅನುಮಾನವಿಲ್ಲ. ಅವರ ಮೊದ ಮೊದಲ ಬರಹಗಳೂ ಅನಂತರದ ಭಾಷಣಗಳ ಭಾಷಾವೈಭವ ಈ ��ಭಿಪ್ರಾಯಕ್ಕೆ ಸಾಕ್ಷಿ ಯನ್ನೊದಗಿಸುತ್ತವೆ. ಅವರು ಕೆಲವು ಒಳ್ಳೆಯ ಕವನಗಳನ್ನು ರಚಿಸಿದ್ದರೆಂಬುದು ಕೆಲವರಿಗಾದರೂ ತಿಳಿದಿರುವ ಅಂಶ. ಚಲನಚಿತ್ರವೂ ಸಾಹಿತ್ಯದಷ್ಟೇ ಮಹತ್ವದ್ದೆಂದು ಭಾವಿಸಿಕೊಂಡಿದ್ದ ಗೌಡರು ಇದು ಸಮಾಜಕ್ಕೆ ಒಳ್ಳೆಯ ಮಾಧ್ಯಮ ವನ್ನೊದಗಿಸುತ್ತದೆಂದು ವಾದಿಸುತ್ತಿದ್ದರಲ್ಲದೆ, ಅನಂತಮೂರ್ತಿಯವರ ಸಂಸ್ಕಾರ ದಂತಹ ಕೃತಿಯನ್ನು ಚಿತ್ರೀಕರಿಸುವುದರಲ್ಲಿ ಕಾರಣಕರ್ತ ರಾಗಿ ತಮ್ಮ ನಿಲುವಿಗೆ ಸಾಕ್ಷಿಯನ್ನೊದಗಿಸಿದ್ದಾರೆ.
ಗೋಪಾಲಗೌಡರ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೆ ಅವರು ಕ್ರಾಂತಿಕಾರ ಮನೋಧರ್ಮವನ್ನು ಹೊಂದಿದ್ದರೆಂಬುದು ಸ್ಪಷ್ಟವಾದಂತಾಯಿತು. ಅವರು ವಿಧಾನ ಸಭಾಧಿವೇಶನದಲ್ಲಿ ಮಾಡುತ್ತಿದ್ದ ಭಾಷಣಗಳು ಅನೇಕ ವಿಚಾರ ಕ್ರಾಂತಿಯನ್ನು ಒಳಗೊಂಡಿರುತ್ತಿದ್ದವು.
ಗೋಪಾಲಗೌಡರಂತಹ ರಾಜಕಾರಣ�� ಮತ್ತೆ ಮತ್ತೆ ಅವತರಿಸಲಿ...
ಸತೀಶ್ ಗೌಡ
[10/6 5:38 ಅಪರಾಹ್ನ] +91 94484 03310: ಇಂದ
ರೋಟರಿ ಮೈಸೂರು
ಗೆ
ಸಂಪಾದಕ ಮಿತ್ರರೇ
ಮೈಸೂರು
ವಿಷಯ: ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ರಕ್ತದಾನ ಶಿಬಿರ .
ಮಾನ್ಯರೇ
ಈ ತಿಂಗಳು ದಿನಾಂಕ 14 ನೇಯ ತಾರೀಕು
ವಿಶ್ವ ರಕ್ತದಾನಿಗಳ ದಿ�� ವಿರುವುದರಿಂದ ಜೂನ್ 13 ನೆಯ ತಾರೀಕು ಮೈಸೂರಿನಲ್ಲಿ 7 ವಿವಿಧ ಸ್ಥಳಗಳಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ, 18 - 50 ವರ್ಷ ಒಳಪಡುವವರು ಯಾರು ಲಸಿಕೆಯನ್ನು ಹಾಕಿಸಿಕೊಳ್ಳ ದವರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ರಕ್ತವನ್ನು ದಾನ ಮಾಡಬಹುದು.
ಈ ಶಿಬಿರವನ್ನು ರೋಟರಿ ಮೈಸೂರ್ ಸಂಸ್ಥೆ, ತೇರಾ ಪಂತ್ ಯುವ ಪರಿಷತ್,
ಹ್ಯೂಮನ್ ಟಚ್ ಮತ್ತು ಆರ್ಜಿಎಸ್ ಈ ಮೂರು ಸಂಸ್ಥೆಗಳು ಸೇರಿ ಈ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಜೆಎಸ್ಎಸ್ ಆಸ್ಪತ್ರೆ, ಕಾಮಾಕ್ಷಿ ಆಸ್ಪತ್ರೆ, ಅಪೋಲೋ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ಚಂದ್ರಕಲಾ ಆಸ್ಪತ್ರೆ , ಸಂತ ಜೋಸೆಫ್ ಆಸ್ಪತ್ರೆ, ಮತ್ತು ಜೀವ ದಾರ ರಕ್ತ ಬ್ಯಾಂಕ್ ಗಳು ಪಾಲ್ಗೊಳ್ಳುತ್ತಿವೆ.
ಈ ಶಿಬಿರವನ್ನು ಮೈಸೂರಿನ ವಿವಿಧ ಸ್ಥಳಗಳಲ್ಲಿ ಏರ್ಪಡಿಸಲಾಗಿದೆ ಮತ್ತು ಇದರ ವಿವರ ಈ ಕೆಳಕಂಡಂತಿದೆ
1) ಮಾಧವಶೆಣೈ ಕಲ್ಯಾಣ ಮಂಟಪ ವಿಶ್ವೇಶ್ವರ ನಗರ.
2) ವೆಂಕಟಲಿಂಗಯ್ಯ ಕಲ್ಯಾಣ ಮಂಟಪ ಸಿದ್ದಾರ್ಥ ಲೇಔಟ್
3) ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ ಕುವೆಂಪು ನಗರ.
4) ಬ್ರಹ್ಮ ಬ್ರಹ್ಮರಂಬ ಕಲ್ಯಾಣಮಂಟಪ ಶ್ರೀರಾಂಪುರ.
5) ಕೊಡವ ಸಮಾಜ ವಿಜಯನಗರ
6) ಕನ್ನಿಕಾ ಮಹಲ್ ಅಶೋಕ ರಸ್ತೆ .
7) ತೆರಪಂತ್ ಭವನ್ ಎಂಜಿ ರಸ್ತೆ.
ಈ ಸ್ಥಳಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಶಿಬಿರವನ್ನು ಆಯೋಜಿಸಲಾಗಿದೆ, ನಾವು ಈ ಮೂಲಕ ನಿಮ್ಮಲ್ಲಿ ಪ್ರಾರ್ಥಿಸುವುದೇ ನೆಂದರೆ ಈ ಶಿಬಿರದಲ್ಲಿ ಅತಿ ಹೆಚ್ಚು ಸ್ವಯಂಸೇವಕರು ಬಂದು ರಕ್ತ ದಾನ ಮಾಡಲಿ ಎಂದು ಕೇಳಿಕೊಳ್ಳುತ್ತೇವೆ.
ಧನ್ಯವಾದಗಳೊಂದಿಗೆ
ಇಂತಿ ನಿಮ್ಮ
ವೆಂಕಟೇಶ್
ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್
ರೋಟರಿ ಮೈಸೂರು ಸಂಸ್ಥೆ.
[12/6 8:20 ಅಪರಾಹ್ನ] +91 78488 27200: ಆರ್ ಎಸ್ ಎಸ್ ನಾಯಕರು ಮತ್ತು ಬಿಜೆಪಿ ನಾಯಕರು ಅರ್ಥಾತ್ ಹಿಂದೂ ಧರ್ಮ ರಕ್ಷಕರು ಭಾರತದ ಎಲ್ಲಾ ಹಿಂದೂ ನಾಯಕರು ಈ ಪ್ರಶ್ನೆಗೆ ಉತ್ತರ ಕೋಡಿ..? ಬ್ರಾಹ್ಮಣರು ಮತ್ತು ಮುಸ್ಲೀಮರ ಮದುವೆ..!
1.▪️ಆರೆಸೆಸ್ ನಾಯಕ ಅಶೋಕ ಸಿಂಘಾಲ್ ಮಗಳು ಸೀಮಾಳ ಗಂಡನ ಹೆಸರು ಮುಖ್ತಾರ್ ಅಬ್ಬಾಸ್ ನಖ್ವಿ.
2.▪️ ಮುರಳಿ ಮನೋಹರ್ ಜೋಷಿ ಮಗಳು ರೇಣು ಗಂಡನ ಹೆಸರು ಶಹನವಾಜ್ ಹುಸೇನ್
3.▪️ ಲಾಲ್ ಕೃಷ್ಣ ಅಡ್ವಾಣಿ ಮಗಳು ರೋಷನ್ ಎರಡನೇ ಗಂಡ ಸಲೀಂ.
4.▪️ ಅಡ್ವಾಣಿಯ ಸಹೋದರನ ಮಗಳು ಪ್ರತಿಭಾ - ಅಲ್ತಾಫ್ ಹುಸೇನ್
5.▪️ ಸುಬ್ರಹ್ಮಣ್ಯ ಸ್ವಾಮಿ ಮಗಳು ಸುಹಾಸಿನಿ - ನದೀಮ್ ಹೈದರ್
6.▪️ ಬಾಳ ಠಾಕ್ರೆ ಮೊಮ್ಮಗಳು - ಸಹಜಾದ್
7.▪️ ಪ್ರವೀಣ್ ತೊಗಾಡಿಯಾ ಮಗಳು - ಅಸ್ಫಾಕ್ ಮೀರ್
8.▪️ ಮೋಹನ್ ಭಾಗವತ್ ಸಹೋದರ ಸಂಬಂಧಿ ಉರ್ಮಿಳಾ ಮಾತೋಡ್ಕರ್ - ಮೊಹಸಿನ್ ಅಖ್ತರ್.
9.▪️ಶೀಲಾ ದಿಕ್ಷೀತ್ ಮಗಳು ಲತೀಫಾ- ಸೈಯದ್ ಮೊಹಮದ್ ಇಮ್ರಾನ್
10.▪️ ಅಶೋಕ ಮಣಿ ಮಗಳು ಅಖೀಲಾ ಮಣಿ - ಶಫೀನ್ ಜಹಾ
11.▪️ ಮೋನಿಕಾ ಬೇಡಿ - ಅಬು ಸಲೇಮ್
12.▪️ ಸಂಗೀತಾ ಬಿಜಲಾನಿ - ಅಜರುದ್ದೀನ್.
13.▪️ದಿನೇಶ್ ಗುಂಡುರಾವ್ - ಟಬು.
14.▪️ಸಚಿನ್ ಪೈಲಟ್ - ಸಾರಾ ಅಬ್ದುಲ್ಲಾ
15.▪️ ಉಮರ್ ಅಬ್ದುಲ್ಲ - ಪಾಯಲ್ ನಾಥ್ ( ಬ್ರಾಹ್ಮಣ )
16.▪️ ಶಾರೂಖ್ ಖಾನ್ : ಪತ್ನಿ ಗೌರಿ ( ಬ್ರಾಹ್ಮಣ )
17.▪️ ಅಮೀರ್ ಖಾನ್ ಮೊದಲ ಪತ್ನಿ ರೀಮಾ ದತ್ತ್ ( ಬ್ರಾಹ್ಮಣ ) ಎರಡನೆ ಪತ್ನಿ ಕಿರಣ್ ರಾವ್ ( ಬ್ರಾಹ್ಮಣ )
18.▪️ ಸೈಫ್ ಅಲಿ ಖಾನ್ - ಕರೀನಾ ಕಪೂರ್( ಬ್ರಾಹ್ಮಣ )
19.▪️ ಸೈಫ್‌ ತಂದೆ ನವಾಬ್ ಮನ್ಸೂರ ಅಲಿ ಖಾನ್ - ಶರ್ಮಿಳಾ ಠಾಗೋರ್ ( ಬ್ರಾಹ್ಮಣ )
20.▪️ ಫರ್ಹಾನ್ ಅಖ್ತರ್ - ಅಧೂನ್ ಭವಾನಿ( ಬ್ರಾಹ್ಮಣ )
21.▪️ ಫರಹಾನ್ ಆಜ್ಮಿ - ಆಯಶಾ ಠಾಕೀಯಾ ( ಬ್ರಾಹ್ಮಣ )
22.▪️ ಶಕಿಲ್ ಲದಾಕ್ - ಅಮೃತ ಅರೋರ( ಬ್ರಾಹ್ಮಣ )
23.▪️ ಸಲ್ಮಾನ್ ಸಹೋದರ ಅರ್ಬಾಜ್ ಖಾನ್ - ಮಲ್ಲೈಕಾ ಅರೋರ( ಬ್ರಾಹ್ಮಣ )
24.▪️ ಸಲ್ಮಾಂನ ಸುಹೇಲ್ ಖಾನ್ - ಸೀಮಾ ಸಚದೇವ್( ಬ್ರಾಹ್ಮಣ )
25.▪️ ಅಮೀರ್ ಖಾನ್ ನ ಸಹೋದರ ಸಂಬಂಧಿ : ಇಮ್ರಾನ್ ಖಾನ್ - ಆವಂತಿಕಾ( ಬ್ರಾಹ್ಮಣ )
26.▪️ ಸಂಜಯ್ ಖಾನ್ ಮಗ ಜಾಯದ್ ಖಾನ್ - ಮಲ್ಲಿಕಾ ಪಾರೇಖ್
27.▪️ ಫಿರೋಜ್ ಖಾನ್ ಮಗ ಫರ್ದೀನ್ ಖಾನ್ - ನತಾಶಾ ಪಾಡ್ಯಾ( ಬ್ರಾಹ್ಮಣ )
28.▪️ ಇರ್ಫಾನ್ ಖಾನ್ - ಸುತಪಾ.
29.▪️ ನಾಸಿರುದ್ದೀನ್ ಷಾ - ರತ್ನಾ ಪಾಠಕ( ಬ್ರಾಹ್ಮಣ )
ಹಿಂದೂ ಧರ್ಮರಕ್ಷಕರಿಗೆ ಬಡ ಮುಸ್ಲೀಮರು ದೇಶ ದ್ರೋಹಿಯಾಗಿಯೂ, ಶ್ರೀಮಂತ ಮುಸ್ಲೀಮರು ಅಳಿಯಂದಿರಾಗಿಯೂ ಕಾಣುತ್ತಾರೆ.
ಹಿಂದೂ ಧರ್ಮದ ನಕಲಿ ಗುತ್ತಿಗೆದಾರರ ಈ ಅಸಲಿ ಬಣ್ಣ ಜನರಿಗೆ ತಿಳಿಯಲಿ. ಅದಕ್ಕಾಗಿ ಈ ಮಾಹಿತಿಯನ್ನು ಹಂಚಿಕೊಳ್ಳಿ.
[14/6 7:37 ಪೂರ್ವಾಹ್ನ] +91 97434 13029: *ಒಬ್ಬ_ವ್ಯಕ್ತಿ_ಒಂದು_ಹಂದಿಯೊಂದಿಗೆ_ದೋಣಿಯಲ್ಲಿ_ಪ್ರಯಾಣಿಸುತ್ತಿದ್ದ!*
*ಆ ದೋಣಿಯಲ್ಲಿ ಸಹ ಪ್ರಯಾಣಿಕರೊಂದಿಗೆ ಓರ್ವ ಪಂಡಿತನೂ ಪ್ರಯಾಣಿಸುತ್ತಿದ್ದ... ಯಾವತ್ತೂ ದೋಣಿಯಲ್ಲಿ ಪ್ರಯಾಣಿಸದ #ಹಂದಿ ಮಾತ್ರ ಒಂದು ಕಡೆ ಕುಳಿತುಕೊಳ್ಳದೇ ಇಲ್ಲಿಂದಲ್ಲಿಗೇ ಅಲ್ಲಿಂದಿಲ್ಲಿಗೆ ಓಡಾಡುತ್ತಿತ್ತು.....*
*ಇದನ್ನು ಕಂಡ #ನಾವಿಕ ಹೇಳಿದ, ಹಂದಿಯನ್ನು ಒಂದೇ ಕಡೆ ನಿಲ್ಲುವಂತೆ ಮಾಡದಿದ್ದರೆ ಈ ದೋಣಿ ಮುಳುಗುವ ಸಂಭವವಿದೆ ಎಂದ...*
*ಇದನ್ನು ನೋಡಿದ #ಪಂಡಿತ ಹೇಳಿದ... ಹಂದಿಯ ಮಾಲೀಕರು ಸಮ್ಮತಿಸಿದರೆ ಹಂದಿಯನ್ನು ನಾನು ಒಂದೇ ಕಡೆ ಕುಳಿತುಕೊಳ್ಳುವಂತೆ ಮಾಡುತ್ತೇನೆ ಎಂದ... ಇದಕ್ಕೆ ಹಂದಿಯ ಮಾಲೀಕನೂ ಒಪ್ಪಿದ....*
*ಪಂಡಿತನು ಹಂದಿಯನ್ನು ತೆಗೆದು ಸೀದಾ ನೀರಿಗೆ ಎಸೆದುಬಿಟ್ಟ.... ಹಂದಿ ತುಂಬಾ ಹೆದರಿಹೋಯ್ತು.... ತುಂಬಾ ಕಷ್ಟಪಟ್ಟು ಈಜಿಕೊಂಡು ದೋಣಿಯ ಕಡೆ ಬರಲಾರಂಭಿಸಿತು... ಯಾರಾದರೂ ನನ್ನನ್ನು ಕಾಪಾಡಿ ಅನ್ನೋ ಧೈನ್ಯತೆಯಿಂದ ನೋಡುತ್ತಿತ್ತು....*
*ಕೊನೆಗೆ ಪಂಡಿತನೇ ಹಂದಿಯನ್ನು ನೀರಿನಿಂದ ಮೇಲಕ್ಕೆತ್ತಿ ದೋಣಿಯಲ್ಲಿ ಹಾಕಿದ.... ಹಂದಿ ಹೋಗಿ ಒಂದು ಮೂಲೆಯಲ್ಲಿ ಕುಳಿತುಕೊಂಡಿತು.... ಇದನ್ನು ನೋಡಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರಿಗೂ ಆಶ್ಚರ್ಯವಾಯ್ತು....*
*ಇಡೀ ದೋಣಿಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೇ ಓಡಾಡುತ್ತಿದ್ದ ಹಂದಿ ಒಮ್ಮೆಲೇ ಯಾಕೆ ಶಾಂತವಾಯ್ತು ಅಂತ ಒಬ್ಬ ಪಂಡಿತನನ್ನು ಕೇಳಿಯೇ ಬಿಟ್ಟ....*
*ಅದಕ್ಕೆ ಪಂಡಿತ ಹೇಳಿದ.... ಎಲ್ಲಿಯವರೆಗೆ ತಮಗೆ ಸಿಕ್ಕಿರುವ ಸ್ವಾತಂತ್ರ್ಯದ ಬಗ್ಗೆ ತಮಗೇ ಅರಿವಿಲ್ಲದೇ ಬೇಕಾಬಿಟ್ಟಿ ಇರುತ್ತೇವೆಯೋ ಅಲ್ಲಿಯವರೆಗೆ ತಮಗೆ ತಮ್ಮ ಮನೆ ದೇಶದ ಬಗೆಗಿನ ಹಿರಿಮೆಯ ಅರಿವಿರುವುದಿಲ್ಲ... ಹಂದಿಗೆ ನೀರಿಗೆ ಬಿದ್ದಮೇಲೆ ದೋಣಿಯ ಮಹತ್ವ ತಿಳಿಯಿತು... ಅಲ್ಲಿಯವರೆಗೆ ಅದು ತನ್ನ ಅನಗತ್ಯ ಓಡಾಟದಿಂದ ದೋಣಿ ಮುಳುಗುತ್ತೆ, ಅದರಿಂದಾಗಿ ಎಲ್ಲರೂ ಸಾಯುತ್ತಾರೆ ಅನ್ನೋ ಪರಿಜ್ಞಾನವಿಲ್ಲದೇ ಬೇಕಾಬಿಟ್ಟಿ ತಿರುಗುತ್ತಿತ್ತು... ಅದೇ ನೀರಿಗೆ ಬಿದ್ದಮೇಲೆ ದೋಣಿಯ ಮಹತ್ವದ ಅರಿವಾಗಿ ಸುಮ್ಮನೇ ಮೂಲೆಯಲ್ಲಿ ಕುಳಿತಿದೆ.....*
*ಭಾರತದಲ್ಲೂ ಕೆಲವೊಂದು ಹಂದಿಗಳು ಹೀಗೆಯೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೇ, ಮೇಲೆ ಕೆಳಗೆ ಹಾರಾಡುತ್ತಿವೆ.... ಅವಗಳನ್ನೆಲ್ಲ ಕರ್ಕೊಂಡೋಗಿ ಸಿರಿಯಾ, ಇರಾನ್ ಅಥವಾ ಪಾಕಿಸ್ತಾನದಲ್ಲಿ 6 ತಿಂಗಳ ಕಾಲ ಬಿಟ್ಟುಬಂದರೆ ಸಾಕು.... ಮತ್ತೆ ಭಾರತಕ್ಕೆ ಬಂದಮೇಲೆ ಈ ಹಂದಿಗಳು ಹೇಗೆ ಬಾಲ ಮುದುಡಿಕೊಂಡು ಮೂಲೆಯಲ್ಲಿ ಬಿದ್ದಿರುತ್ತವೆ ನೋಡಿ....*
*ಭಾರತದಲ್ಲೇ ಹುಟ್ಟಿ ಬೆಳೆದು, ಇಲ್ಲಿನ ಅನ್ನ ನೀರು ಸೇವಿಸಿ ಭಾರತವನ್ನೇ ದೂರುವ ಹಂದಿಗಳಿಗೆ ಈ ಪೋಸ್ಟ್ ಸಮರ್ಪಣೆ.....*
*ಜೈ ಹಿಂದ್*🇮🇳
0 notes
Text
ಅವತಾರ್ 2 ಫೀಲ್ಡ್ ವರ್ಕ್‌ಪ್ಲೇಸ್ ವಿಂಗಡಣೆ ದಿನ 4: 'ಅವತಾರ್ 2' ಉಡಾವಣೆಯ ನಾಲ್ಕನೇ ದಿನದಂದು ಅದ್ಭುತವಾಗಿ ಗಳಿಸುತ್ತದೆ, ಒಟ್ಟಾರೆ ವಿಂಗಡಣೆಯನ್ನು ತಿಳಿಯಿರಿ
ಅವತಾರ್ 2 ಫೀಲ್ಡ್ ವರ್ಕ್‌ಪ್ಲೇಸ್ ವಿಂಗಡಣೆ ದಿನ 4: ‘ಅವತಾರ್ 2’ ಉಡಾವಣೆಯ ನಾಲ್ಕನೇ ದಿನದಂದು ಅದ್ಭುತವಾಗಿ ಗಳಿಸುತ್ತದೆ, ಒಟ್ಟಾರೆ ವಿಂಗಡಣೆಯನ್ನು ತಿಳಿಯಿರಿ
ಅವತಾರ್ 2 ಫೀಲ್ಡ್ ವರ್ಕ್‌ಪ್ಲೇಸ್ ವಿಂಗಡಣೆ ದಿನ 4: ಜೇಮ್ಸ್ ಕ್ಯಾಮರೂನ್ ಅವರ ಚಿತ್ರ ‘ಅವತಾರ್ ದಿ ಮೀನ್ಸ್ ಆಫ್ ವಾಟರ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಲಾಂಚ್ ಆಗಿ ಕೇವಲ 4 ದಿನಗಳು ಕಳೆದಿವೆ ಮತ್ತು ಇದು ಫೀಲ್ಡ್ ವರ್ಕ್‌ಪ್ಲೇಸ್‌ನಲ್ಲಿ ಹವಾ ಸೃಷ್ಟಿಸಿದೆ. ‘ಅವತಾರ್ ದಿ ಮೀನ್ಸ್ ಆಫ್ ವಾಟರ್’ ನಲ್ಲಿನ ಅತ್ಯಾಧುನಿಕ ಜ್ಞಾನ, ಅದ್ಭುತ ದೃಶ್ಯಗಳು ಮತ್ತು ವಿಎಫ್‌ಎಸ್ ಅನ್ನು ನೋಡಿ ವೀಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಪ್ರಪಂಚದಾದ್ಯಂತದ ವೀಕ್ಷಕರು ಈ ಚಿತ್ರಕ್ಕೆ…
Tumblr media
View On WordPress
0 notes
aakrutikannada · 1 year
Text
ಹಾಲವಾಣ (ಹೊಂಗಾರಕ) ಮಹತ್ವ - ಸುಮನಾ ಮಳಲಗದ್ದೆ
ಹಾಲವಾಣ ಎಲೆಯೊಂದಿಗೆ ಈರುಳ್ಳಿಯನ್ನು ಸೇರಿಸಿ ಪಲ್ಯ ಮಾಡಿ ಸ��ವಿಸುವುದರಿಂದ ಬಾಣಂತಿಯ ಎದೆ ಹಾಲು ಹೆಚ್ಚುತ್ತದೆ ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಹಾಲವಾಣ ಗಿಡದ ಮಹತ್ವದ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಂಭಿಸಲು. ದನ ಕರುಗಳಿಗೆ ಮೇವು. ದನ ಕರುಗಳ ಕಾಲಿಗೆ ಹಾಸಿದರೆ ಗೊಬ್ಬರ. ಬೆಳೆದ ಕಾಯಿ ಆಟವಾಡಲು ಚೆನ್ನೈ…
Tumblr media
View On WordPress
0 notes
vnews24kannada · 4 years
Text
ಚರಂಡಿ ನೀರು ನಡು ರಸ್ತೆಗೆ ಬಂದ ಕಾರಣ ಜನ ಸಾಮಾನ್ಯರಿಗೆ ತೊಂದರೆ
ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲುಕಿನ ಗೆಜ್ಜಲಗಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರೇ ಹೆಸರೊರು ಗ್ರಾಮದಲ್ಲಿ ಮಳೆ ನೀರು ಮತ್ತು ಚರಂಡಿ ನೀರು ನಡು ರಸ್ತೆಯಲ್ಲಿ ನಿಂತ್ತು ಇರುವುದರಿಂದ ರೈತರಿಗೆ ಮತ್ತು ದನ ಕರುಗಳಿಗೆ ತುಂಬ ಕಷ್ಟವಾಗಿದೆ ಆದ ಕಾರಣ ಸಂಬಂದ ಪಟ್ಟ ಅಧಿಕಾರಿಗಳಿಗೆ ಎಷ್ಟ ಬಾರಿ ಉರಿನ ಜನರು ಹೇಳಿದರು ತಲೆ ಕೆಡಿಸಿಕೊಂಡಿಲ್ಲ.
 ಗ್ರಾಮ ಪಂಚಾಯತಿ ಅಧಿಕಾರಿಗಳು ಯಾವುದೆ ಕ್ರಮ ಕೈಗೋಳ್ಳುತ್ತಿಲ್ಲ  ಮತ್ತು ನಮ್ಮ ಕ್ಷೇತ್ರದ ಶಾಸಕರು ಗಮನಕ್ಕೆ ಇದ್ದರು ಕೂಡ…
View On WordPress
0 notes
sanjumasur · 6 years
Text
ಹಿಂದೂ ಧರ್ಮದ ಪ್ರಕಾರ ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ನಿಮಗೆ ದನ, ಆಯಸ್ಸು ಹಾಗೂ, ಕೀರ್ತಿ ಲಭಿಸುತ್ತದೆ ? ಹಾಗಾದರೆ ಯಾವ ಸಮಯದಲ್ಲಿ ಸ್ನಾನ ಮಾಡಬೇಕು ಅಂತಿರಾ !!!
ಹಿಂದೂ ಧರ್ಮದ ಪ್ರಕಾರ ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ನಿಮಗೆ ದನ, ಆಯಸ್ಸು ಹಾಗೂ, ಕೀರ್ತಿ ಲಭಿಸುತ್ತದೆ ? ಹಾಗಾದರೆ ಯಾವ ಸಮಯದಲ್ಲಿ ಸ್ನಾನ ಮಾಡಬೇಕು ಅಂತಿರಾ !!!
ಈಗಿನ ನಮ್ಮ ಕೆಲಸದ ಒತ್ತಡದಲ್ಲಿ ನಾವು ಮನೆಗೆ ಬರುವುದು ತುಂಬಾ ಲೇಟ್ ಆಗುತ್ತೆ ಹಾಗೂ ಮನೆಗೆ ಬಂದು ಕೂಡ ನಾವು ಕೆಲಸ ಮಾಡಿಕೊಂಡು ಮಲಗುವುದು  ರಾತ್ರಿ 12 ಗಂಟೆ ಆಗಬಹುದು, ಹಲವರು ಜನ ಈ ರೀತಿಯಾಗಿ ತಮ್ಮ ಜೀವನವನ್ನು ನಡೆಸಿಕೊಂಡು ಬೆಳಗ್ಗೆ ಹೇಳುವುದು ತುಂಬಾ ಲೇಟ್ ಆಗುತ್ತದೆ. ಕೆಲವರು ಬೆಳಗ್ಗೆ ಏಳುವುದು 9 ರಿಂದ 10 ಗಂಟೆ ಸೂರ್ಯ ನೆತ್ತಿಮೇಲೆ ಬಂದಾಗ ಎದ್ದು  ಸ್ನಾನವನ್ನು ಮಾಡುತ್ತಾರೆ. ಹೀಗೇನಾದರೂ ನೀವು ಬೆಳಗ್ಗೆ ಲೆಟಾಗೆದ್ದು ಸೂರ್ಯ ನೆತ್ತಿಗೆ ಬಂದಿರುವಂತಹ ಸಮಯದಲ್ಲಿ ಸ್ನಾನ ವ್ ಏನಾದರೂ…
View On WordPress
0 notes